ಕರ್ನಾಟಕ ಪರೀಕ್ಷಾ ಮಂಡಳಿ ಇದೀಗ ಎಸ್ಎಸ್ಎಲ್ ಸಿ ರಿಸಲ್ಟ್ ಹೊರಡಿಸಿದೆ. ಯಾರೆಲ್ಲಾ ಕಡಿಮೆ ಅಂಕ ಪಡೆದುಕೊಂಡಿದ್ದೀರೋ ಹಾಗೂ ಇನ್ನೂ ಹೆಚ್ಚು ಅಂಕ ಬರುವ ನಿರೀಕ್ಷೆ ಇದ್ದವರು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ನಾಳೆಯಿಂದ ಮರು ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಮರು ಮೌಲ್ಯಮಾಪನದ ಶುಲ್ಕ ವಿವರ ಇಂತಿದೆ: ಪ್ರತೀ ವಿಷಯಕ್ಕೆ 700 ರೂ. ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹಣ ಪಾವತಿಸಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಕೆಗೆ ೩೦ ದಿನಗಳವರೆಗೆ ಮಾತ್ರ ಅವಧಿ ನೀಡಲಾಗಿರುತ್ತದೆ.
ಫಲಿತಾಂಶ ಪ್ರಕಟವಾದ ಬಳಿಕ ಮರುಮೌಲ್ಯಮಾಪನಕ್ಕೆ ಪ್ರಾರಂಭ ದಿನಾಂಕ ಹಾಗೂ ಕೊನೆಯ ದಿನಾಂಕವನ್ನ ಆಫೀಶಿಯಲ್ ವೆಬ್ಸೈಟ್ ನಲ್ಲಿ kseeb.kar.nic.in ಪ್ರಕಟಿಸಲಾಗುವುದು. ಕೊನೆಯ ದಿನಾಂಕದ ಬಳಿಕ ಬರುವ ಅರ್ಜಿಗಳನ್ನ ತಿರಸ್ಕರಿಸಲಾಗುವುದು. ಫೋಟೋಕಾಪಿ ಇಲ್ಲದೇ ಬರೀ ಅರ್ಜಿ ಕಳುಹಿಸಿದ್ದಲ್ಲಿ, ಅರ್ಜಿಯನ್ನ ರಿಜೆಕ್ಟ್ ಮಾಡಲಾಗುವುದು.
ಬೋರ್ಡ್ ನೀಡಿರುವ ಮಾದರಿಯಲ್ಲಿಯೇ ಅರ್ಜಿ ಸಲ್ಲಿಸಿ. ಮರು ಮೌಲ್ಯಮಾಪನದ ಬಳಿಕ ಸ್ಪೀಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಮರು ರಿಸಲ್ಟ್ ಕಳುಹಿಸಲಾಗುವುದು. ಒಂದು ವೇಳೆ ೬ಕ್ಕಿಂತ ಅಧಿಕ ಅಂಕ ಹೆಚ್ಚುವರಿ ಸಿಕ್ಕಿದ್ದಲ್ಲಿ ಅರ್ಜಿ ಶುಲ್ಕ ಹಿಂತಿರುಗಿಸಲಾಗುವುದು.
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಹೇಗೆ:
ಈ ಕೆಳಗಿನ ಸ್ಟೆಪ್ಸ್ ಮೂಲಕ ಅರ್ಜಿ ಸಲ್ಲಿಸಿ
- ಸ್ಟೆಪ್ 1: ಆಫೀಶಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ
- ಸ್ಟೆಪ್ 2: ಹೋಮ್ ಪೇಜ್ನಲ್ಲಿರುವ ಎಸ್ಎಸ್ಎಲ್ ಸಿ ಎಕ್ಸಾಂ ಸೆಕ್ಷನ್ ಅಡಿಯಲ್ಲಿ ಇರುವ more ಗೆ ಲಿಂಕ್ ಮಾಡಿ
- ಸ್ಟೆಪ್ 3: more ಆಯ್ಕೆಯ ಕೆಳಭಾಗದಲ್ಲಿ ಇರುವ ಅರ್ಜಿ ನಮೂನೆ ಮೇಲೆ ಕ್ಲಿಕ್ ಮಾಡಿ
- ಸ್ಟೆಪ್ 4: ಇದೀಗ ಎಲ್ಲಾ ಎಸ್ಎಸ್ಎಲ್ ಸಿ ಅರ್ಜಿ ನಮೂನೆ ಕಾಣಿಸಿಕೊಳ್ಳುತ್ತದೆ
- ಸ್ಟೆಪ್ 5: Re-Valuation Application ಲಿಂಕ್ ಕ್ಲಿಕ್ ಮಾಡಿ
- ಸ್ಟೆಪ್ 6: ಇದೀಗ ಮರುಮೌಲ್ಯಮಾಪನದ ಪಿಡಿಎಫ್ ಫಾರ್ಮೆಟ್ ಪರದೆ ಮೇಲೆ ಮೂಡುತ್ತದೆ
- ಸ್ಟೆಪ್ 7: ಅರ್ಜಿಯನ್ನ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ. ಅರ್ಜಿ ಶುಲ್ಕ ಪಾವತಿಸಿ ಸಂಬಂಧಪಟ್ಟ ಬೋರ್ಡ್ ಗೆ ಪೋಸ್ಟ್ ಮಾಡಿ
ಮರುಮೌಲ್ಯಮಾಪನಕ್ಕೆ ಅರ್ಜಿ ನಮೂನೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ