ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತವು ಕರ್ನಾಟಕ ರಾಜ್ಯದಾದ್ಯಂತ ನೂತನ ಶಾಖೆಯನ್ನು ಆರಂಭಿಸುತ್ತಿದ್ದು ಒಟ್ಟು 187 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಆಸಕ್ತರು ಹುದ್ದೆಗಳ ಬಗೆಗೆ ತಿಳಿದುಕೊಂಡು ಅಕ್ಟೋಬರ್ 5,2020ರೊಳಗೆ ಅರ್ಜಿ ಸಲ್ಲಿಸಬಹುದು.
ರಾಜ್ಯದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅಕ್ಟೋಬರ್ 5,2020ರೊಳಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಹುದ್ದೆಗಳ ಬಗೆಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮುಂದೆ ಓದಿ.
ಖಾಲಿ ಹುದ್ದೆಗಳ ವಿವರ:
ಅಂತರಿಕ ಲೆಕ್ಕ ಪರಿಶೋಧಕರು - 5 ಹುದ್ದೆಗಳು
ಮಾನವ ಸಂಪನ್ಮೂಲ ಅಧಿಕಾರಿಗಳು - 2 ಹುದ್ದೆಗಳು
ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು - 5 ಹುದ್ದೆಗಳು
ಹಿರಿಯ ಅಧಿಕಾರಿಗಳು - 50 ಹುದ್ದೆಗಳು
ಕಿರಿಯ ಅಧಿಕಾರಿಗಳು - 50 ಹುದ್ದೆಗಳು
ಮಾರಾಟ ಅಧಿಕಾರಿಗಳು - 5 ಹುದ್ದೆಗಳು
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು - 5 ಹುದ್ದೆಗಳು
ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ - 5 ಹುದ್ದೆಗಳು
ಸಿದ್ದಸಿರಿ ಕೃಷಿ ಸೇವಾ ಕೇಂದ್ರ - 5 ಹುದ್ದೆಗಳು
ಇಲೆಕ್ಟ್ರಿಶಿಯನ್ಸ್ - 5 ಹುದ್ದೆಗಳು
ವಾಹನ ಚಾಲಕರು /ಸಿಪಾಯಿ - 50 ಹುದ್ದೆಗಳು
ಒಟ್ಟು 187 ಹುದ್ದೆಗಳು
ಹುದ್ದೆಗಳಿಗೆ ಕೇಳಲಾಗಿರುವ ವಿದ್ಯಾರ್ಹತೆ:
ಅಂತರಿಕ ಲೆಕ್ಕ ಪರಿಶೋಧಕರು - ಚಾರ್ಟೆಡ್ ಅಕೌಂಟೆಂಟ್ಸ್/ಆಡಿಟರ್ಸ್/ಬ್ಯಾಂಕಿಂಗ್ ಸೆಕ್ಟರ್ ನಲ್ಲಿ ಅನುಭವ
ಮಾನವ ಸಂಪನ್ಮೂಲ ಅಧಿಕಾರಿಗಳು - ಎಂಬಿಎ/ಹೆಚ್ಆರ್ ಅಥವಾ ಸ್ನಾತಕೋತ್ತರ ಪದವಿ ಜೊತೆಗೆ ಹೆಚ್ಆರ್
ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು - ಬಿ,ಕಾಂ/ಎಂ.ಕಾಂ/ಎಂಬಿಎ
ಹಿರಿಯ ಅಧಿಕಾರಿಗಳು - ಬಿ.ಕಾಂ/ ಎಂ.ಕಾಂ ಎಂಬಿಎ/ಎಂಸಿಎ/ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್
ಕಿರಿಯ ಅಧಿಕಾರಿಗಳು - ಬಿ.ಕಾಂ/ಬಿ.ಎಸ್ಸಿ (ಅಗ್ರಿ) ಬಿಸಿಎ/ಬಿಬಿಎ ಜೊತೆಗೆ ಕಂಪ್ಯೂಟರ್ ಜ್ಞಾನ
ಮಾರಾಟ ಅಧಿಕಾರಿಗಳು - ಪದವಿ ಜೊತೆಗೆ ಅನುಭವ ಉಳ್ಳವರಿಗೆ ಆದ್ಯತೆ
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು - ಡಿ.ಫಾರ್ಮಾ/ಬಿ. ಫಾರ್ಮಾ ಜೊತೆಗೆ ಅನುಭವ ಉಳ್ಳವರಿಗೆ ಆದ್ಯತೆ
ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ - ಎಂಬಿಎ ಮಾರ್ಕೆಟಿಂಗ್ ಜೊತೆಗೆ ಕೋಲ್ಡ್ ಸ್ಟೋರೇಜ್ ನಲ್ಲಿ ಕೆಲಸ ನಿರ್ವಹಿಸಿದ ಅನುಭವ
ಸಿದ್ದಸಿರಿ ಕೃಷಿ ಸೇವಾ ಕೇಂದ್ರ - ಬಿಎಸ್ಸಿ ಅಗ್ರಿ/ಕೆಮಿಸ್ಟ್ರಿ ಜೊತೆಗೆ ರಸಗೊಬ್ಬರ ಮಳಿಗೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ
ಇಲೆಕ್ಟ್ರಿಶಿಯನ್ಸ್ - ಐಟಿ ಇಲೆಕ್ಟ್ರೀಶಿಯನ್ ಜೊತೆಗೆ ವೃತ್ತಿಯಲ್ಲಿ ಅನುಭವ
ವಾಹನ ಚಾಲಕರು /ಸಿಪಾಯಿ - 10ನೇ ತರಗತಿ ಉತ್ತೀರ್ಣ ಜೊತೆಗೆ ವಾಹನ ಚಾಲನಾ ಪರವಾನಗಿ
ಹುದ್ದೆಗಳಿಗನುಸಾರ ಕೇಳಲಾಗಿರುವ ವಯೋಮಿತಿ:
ಅಂತರಿಕ ಲೆಕ್ಕ ಪರಿಶೋಧಕರು - 25 -50
ಮಾನವ ಸಂಪನ್ಮೂಲ ಅಧಿಕಾರಿಗಳು - 25 -50
ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು - 25-50
ಹಿರಿಯ ಅಧಿಕಾರಿಗಳು - 21 -35
ಕಿರಿಯ ಅಧಿಕಾರಿಗಳು - 21 - 35
ಮಾರಾಟ ಅಧಿಕಾರಿಗಳು - 21 - 50
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ವಿತರಕರು - 21 -50
ಸಿದ್ಧಸಿರಿ ಕೋಲ್ಡ್ ಸ್ಟೋರೇಜ್ - 21 - 40
ಸಿದ್ದಸಿರಿ ಕೃಷಿ ಸೇವಾ ಕೇಂದ್ರ - 21 -40
ಇಲೆಕ್ಟ್ರಿಶಿಯನ್ಸ್ - 21 -40
ವಾಹನ ಚಾಲಕರು /ಸಿಪಾಯಿ - 19 - 35
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅಭ್ಯರ್ಥಿಗಳು ಸಂದರ್ಶನಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಕೆ:
ಅರ್ಹ ಅಭ್ಯರ್ಥಿಗಳು ಸ್ವ-ವಿವರವುಳ್ಳ ಸಂಪೂರ್ಣ ಮಾಹಿತಿ, ಭಾವಚಿತ್ರದೊಂದಿಗೆ 200/-ರೂ ಗಳ ಡಿ.ಡಿ ತೆಗೆದದು SIDDHASIRI SOUHARDA SAHAKARI LTD, VIJAUAPUR ಹೆಸರಿನಲ್ಲಿ ಸಂದಾಯ ಮಾಡಬೇಕು ಅಥವಾ ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಹಣ ಜಮಾ ಮಾಡಿದ ರಸೀದಿ ಪಡೆಯಬೇಕು. ನಂತರ ಅರ್ಜಿಯನ್ನು ಕಚೇರಿಯ ವಿಳಾಸಕ್ಕೆ ಅಕ್ಟೋಬರ್ 5,2020ರೊಳಗೆ ತಲುಪಿಸಬೇಕು.
ಅರ್ಜಿ ಜೊತೆಗೆ ಯಾವುದೇ ಮೂಲ ದಾಖಲೆಗಳನ್ನು ಲಗತ್ತಿಸಬಾರದು. ಕೇವಲ ನಕಲು ಪ್ರತಿಗಳನ್ನು ಮಾತ್ರ ಲಗತ್ತಿಸಬೇಕು. ರಾಜ್ಯದಲ್ಲಿ ಯಾವುದೇ ಶಾಖೆಗಳಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರುವವರು ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
ಸಿದ್ಧಸಿರಿ ಸೌಹಾರ್ದ ಸಹಕಾರಿ ನಿಯಮಿತ,
ವಿಜಯಪುರ ಆಡಳಿತ ಕಛೇರಿ,
ಸಿದ್ಧೇಶ್ವರ ದೇವಾಲಯ ಆವರಣ,
ಸಿದ್ದೇಶ್ವರ ಮುಖ್ಯ ರಸ್ತೆ,
ವಿಜಯಪುರ - 586101.
ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಮುಂದೆ ನೋಡಿ.