ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ಟ್ ಮೂಲಕ 2017-18 ಸಾಲಿನ ವಿದ್ಯಾರ್ಥಿವೇತನಕ್ಕಾಗಿ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಂದು ಸಾವಿರ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುತ್ತಿದ್ದು, ಐದನೇ ತರಗತಿಯಿಂದ ಪದವಿಯವರೆಗೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರೋತ್ಸಾಹಧನ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ಟ್ ವೆಬ್ಸೈಟ್ ವಿಳಾಸದಿಂದ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಕಚೇರಿಯ ವಿಳಾಸಕ್ಕೆ ಕಳುಹಿಸತಕ್ಕದ್ದು.
- ತಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಅಂಕಪಟ್ಟಿಗಳ ನಕಲು
- ಪ್ರೋತ್ಸಾಹಧನ ಅರ್ಜಿ ಶುಲ್ಕ ರೂ.100/- ಗಳ ಅಂಚೆ ಕಚೇರಿಯ ಪೋಸ್ಟಲ್ ಆರ್ಡರ್ , ಮನಿ ಆರ್ಡರ್ ಅಥವಾ ಡಿ.ಡಿ ಯನ್ನು STUDENTS INSOIRATION TRUST ಹೆಸರಿನಲ್ಲಿ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳುಹಿಸತಕ್ಕದ್ದು.
- ಐದನೇ ತರಗತಿಯಿಂದ ಪದವಿ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ವಾರ್ಷಿಕ ಪ್ರೋತ್ಸಾಹಧನದ ವಿವರ
5ನೇ ತರಗತಿಯಿಂದ 10ನೇ ತರಗತಿಯವರೆಗೂ ರೂ.3000/-
10ನೇ ತರಗತಿಯಿಂದ ಪದವಿಯವರೆಗೂ ರೂ. 4000/- (ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು)
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-08-2017
ಆಯ್ಕೆಪಟ್ಟಿ ಪ್ರಕಟಿಸುವ ದಿನಾಂಕ: 30-09-2017
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9742667289,9742667589
ದೂರವಾಣಿ ಕರೆಮಾಡುವ ಸಮಯ: ಬೆಳಗ್ಗೆ 9:30 ರಿಂದ ಸಂಜೆ 6:00 ರವರೆಗೆ
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕಚೇರಿ ವಿಳಾಸ
STUDENTS INSPIRATION TRUST
#573, 6TH MAIN, D GROUP LAYOUT
SRIGANDADAKAVALU, VISHWANIDAM POST,
BANGALORE-560091
ಸ್ಟೂಡೆಂಟ್ ಇನ್ಸ್ಪಿರೇಷನ್ ಟ್ರಸ್
ತಂದೆ ತಾಯಿಗೆ ಹೊರೆಯಾಗಬಾರದೆಂದು ಯೋಚಿಸುವ ವಿದ್ಯಾರ್ಥಿಗಳು, ವಿಕಲಚೇತನ ವಿದ್ಯಾರ್ಥಿಗಳು ಸೇರಿದಂತೆ ಆಯ್ಕೆಯಾದ 1000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು.
ಬಡತನದ ಬೇಗೆಯಲ್ಲಿ ವಿದ್ಯಾಭ್ಯಾಸ ಕಳೆದುಕೊಂಡವರ ಬದುಕಿನಲ್ಲಿ ಸ್ಟೂಡೆಂಟ್ಸ್ ಇನ್ಸ್ಪಿರೇಷನ್ ಟ್ರಸ್ ಚಿಲುಮೆಯಾಗಬೇಕೆಂಬ ನಿಟ್ಟಿನಲ್ಲಿ ಆರಂಭಗೊಂಡ ಸಂಸ್ಥೆ ಸಾಕಷ್ಟು ಸಕಾರಾತ್ಮಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಡವರ ಪಾಲಿಗೆ ಆಶಾಕಿರಣವಾಗಿರುವ ಟ್ರಸ್ಟ್ ಇದೀಗ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸಕ್ಕಾಗಿ ಹಾತೊರಿಯುತ್ತಿರುವ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಮುಂದಾಗಿದೆ.
ಇಂದಿನ ವಿದ್ಯಾರ್ಥಿಗಳೇ ದೇಶದ ಮುಂದಿನ ಬೆನ್ನೆಲುಬು. ದೇಶದಲ್ಲಿ ಸಾಕಷ್ಟು ಬಡ ವಿದ್ಯಾರ್ಥಿಗಳು ತಮ್ಮ ಒಂದು ತಿಂಗಳ ಫೀಸನ್ನು ಕಟ್ಟಲಾಗದಂತಹ ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಸ್ಟೂಡೆಂಟ್ ಇನ್ಸ್ಪಿರೇಷನ್ ಟ್ರಸ್ಟ್ ತಂಡ ಬಡವರಿಗೆ ಸ್ಪಂದಿಸುವವರನ್ನು ವಿದ್ಯಾರ್ಥಿಗಳಿಗೆ ಸಹಾಯಸ್ತ ನೀಡುವ ಮನೋಭಾವವುಳ್ಳವರನ್ನು ಸಂಪರ್ಕಿಸಿ ಅದರಲ್ಲೂ ದೊಡ್ಡ ಉದ್ಯಮಿಗಳು ಹಾಗೂ ಸಮಾಜಮುಖಿ ಜನರ ಸಹಾಯದಿಂದಾಗಿ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಲಾಯಿತು.


Click it and Unblock the Notifications











