ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ 10 ನೇ ತರಗತಿಯ ಗಣಿತ ಹಾಗೂ 12 ನೇ ತರಗತಿ ಅರ್ಥಶಾಸ್ತ್ರ ವಿಷಯದಲ್ಲಿ ಮರುಪರೀಕ್ಷೆ ಮಾಡಲು ನಿರ್ಧರಿಸಿದೆ.
ಯಾಕೆ ಗಣಿತ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ಮರು ಪರೀಕ್ಷೆ ?
ದಿ ಸಿಬಿಎಸ್ಇ ಇತ್ತೀಚೆಗೆ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಈ ತಿಂಗಳು ನಡೆದ 10ನೇ ತರಗತಿಯ ಗಣಿತ ಹಾಗೂ 12 ನೇ ತರಗತಿ ಅರ್ಥಶಾಸ್ತ್ರ ವಿಷಯದ ಪರೀಕ್ಷೆಯನ್ನ ರದ್ದು ಗೊಳಿಸಿ, ಸದ್ಯದಲ್ಲೇ ಮರು ಪರೀಕ್ಷೆಯನ್ನ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ. ಪರೀಕ್ಷೆ ಮುಂದಿನ ದಿನವೇ ಪ್ರಶ್ನಾ ಪತ್ರಿಕೆ ಲೀಕ್ ಆಗಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಣೆ ನೀಡಿದೆ ಇಲಾಖೆ.
ಯಾವಾಗ ಮರು ಪರೀಕ್ಷೆ ಸಾಧ್ಯತೆ?
ಇನ್ನೂ ಮರು ಪರೀಕ್ಷೆ ದಿನ ನಿಗದಿಯಾಗಿಲ್ಲ, ಬದಲಿಗೆ ಈ ವಾರದಲ್ಲೇ ಆಫೀಶಿಯಲ್ ವೆಬ್ಸೈಟ್ ಮೂಲಕ ಮರು ಪರೀಕ್ಷೆ ದಿನಾಂಕವನ್ನ ಪ್ರಕಟಿಸಲಾಗುವುದು ಎಂದು ಸ್ಪಷ್ಟ ಪಡಿಸಿದೆ ಇಲಾಖೆ
ಈ ಬಗ್ಗೆ ಹೆಚ್ಆರ್ಡಿ ಸಚಿವರು ಏನು ಹೇಳ್ತಾರೆ?
ಈ ಬಗ್ಗೆ ಮಾತನಾಡಿದ ಹೆಚ್ಆರ್ಡಿ ಸಚಿವ ಪ್ರಕಾಶ್ ಜವಡೇಕರ್, ಈ ಘಟನೆ ದೆಹಲಿ ಸ್ಕೂಲ್ನಲ್ಲಿ ನಡೆದಿದೆ. ಈ ಬಗ್ಗೆ ತನಿಖೆ ನಡೆಯಲಿದೆ. ದೆಹಲಿ ಸ್ಕೂಲ್ನಲ್ಲಿ ಮಾತ್ರ ಪರೀಕ್ಷೆ ಇಲ್ಲ ಇಡೀ ದೇಶದಲ್ಲಿ ಮರು ಪರೀಕ್ಷೆ ನಡೆಸುವುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಈ ಬಗ್ಗೆ ಈಗಾಗಲೇ ರಿಪೋರ್ಟ್ ನೀಡಲಾಗಿದೆ ಎಂದ ಸಚಿವ
ಈ ಬಗ್ಗೆ ಪೋಷಕರು ಏನಂತಾರೆ ?
ಈ ಘಟನೆ ನಡೆದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚು ಆತಂಕಗೊಂಡಿದ್ದಾರೆ. ಈ ಬಗ್ಗೆ ಅನಿಸಿಕೆ ಹಂಚಿಕೊಂಡ ಸೈಕೋಲಾಜಿಸ್ಟ್ ಡಾ. ಮಿನಿ ರಾವ್ ಅವರು, ನನ್ನ ಮಗ ಇಷ್ಟು ದಿನ ಓದಿ, 6 ಗಂಟೆಗೂ ಹೆಚ್ಚು ಟ್ಯೂಶನ್ನಲ್ಲೂ ಕಲಿತು ಇದೀಗ ಮತ್ತೆ ಮರುಪರೀಕ್ಷೆ ಬರಿಯಬೇಕು ಅಂದ್ರೆ ನನಗೆ ಅಸಹಾಯಕತೆ ಅನುಭವವಾಗುತ್ತಿದೆ. ಪರೀಕ್ಷೆ ಮುಗಿದ ಕೂಡಲೇ ಪರೀಕ್ಷೆ ಚೆನ್ನಾಗಿತ್ತು ಎಂದಿದ್ದ ಮಗ ಅಲ್ಲಿಗೆ ಟೆನ್ಶನ್ ಮುಗಿದಿತ್ತು ಅಂದುಕೊಂಡ್ರೆ ಇದೀಗ ಮತ್ತೆ ಟೆನ್ಶನ್ ಕಂಟಿನ್ಯೂ ಆಗಿದೆ ಎಂದಿದ್ದಾರೆ.