ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2018-19 ನೇ ಸಾಲಿನ ಎಸ್.ಎಸ್.ಎಲ್.ಸಿ/ ದ್ವಿತೀಯ ಪಿ.ಯು.ಸಿ.ಯಲ್ಲಿ ವ್ಯಾಸಂಗ ಮಾಡಿ ಮಾರ್ಚ್ ಮತ್ತು ಏಪ್ರಿಲ್ 2019ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಶೇ.90 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕೇಳಲಾಗಿರುವ ಅರ್ಹತೆ:
* ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಯಿಯಾಗಿರಬೇಕು.
* ಹಿಂದುಳಿದ ವರ್ಗಗಳ ಪ್ರವರ್ಗ-1,2ಎ,3ಎ ಅಥವಾ 3ಬಿಗೆ ಸೇರಿರಬೇಕು.
* ಎಸ್.ಎಸ್.ಎಲ್.ಸಿ/ ದ್ವಿತೀಯ ಪಿ.ಯು.ಸಿ. ಯಲ್ಲಿ ಶೇಕಡ 90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ:
| ಕ್ರ.ಸಂ | ಪ್ರವರ್ಗ | ಆದಾಯ ಮಿತಿ |
| 1 | 1 | ರೂ.2.50 ಲಕ್ಷ |
| 2 | 2ಎ,3ಎ ಮತ್ತು 3ಬಿ | ರೂ.1.00 ಲಕ್ಷ |
ಪ್ರತಿಭಾ ಪುರಸ್ಕಾರದ ಮೊತ್ತ:
| ಕ್ರ.ಸಂ. | ತರಗತಿ | ಪ್ರತಿಭಾ ಪುರಸ್ಕಾರ ನೀಡುವ ಗರಿಷ್ಟ ವಿದ್ಯಾರ್ಥಿಗಳ ಸಂಖ್ಯೆ | ಪ್ರತಿಭಾ ಪುರಸ್ಕಾರದ ಮೊತ್ತ (ರೂ.ಗಳಲ್ಲಿ) |
| 1 | ಎಸ್.ಎಸ್.ಎಲ್.ಸಿ | 1000 | 10,000/- |
| 2 | ದ್ವಿತೀಯ ಪಿ.ಯು.ಸಿ | 500 | 15,000/- |
ವಿದ್ಯಾರ್ಥಿಗಳು ಈ ಬಗೆಗೆ ಅಧಿಸೂಚನೆಯನ್ನು ಓದಿಕೊಂಡು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಖುದ್ದಾಗಿ ಅಥವಾ ಕಚೇರಿಗೆ ಸಲ್ಲಿಸುವ ಅವಕಾಶವನ್ನು ನೀಡಲಾಗಿರುವುದಿಲ್ಲ. ಏನೆಲ್ಲಾ ದಾಖಲೆಗಳನ್ನು ಒದಗಿಸಬೇಕಿರುತ್ತದೆ ಎಂದು ಅಧಿಸೂಚನೆಯನ್ನು ಓದಿ ತಿಳಿಯತಕ್ಕದ್ದು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30.7.2019ರ ಸಂಜೆ 5:00 ಗಂಟೆ
ಇಲಾಖೆಯ ಅಧಿಕೃತ ವೆಬ್ಸೈಟ್: http://www.backwardclasses.kar.nic.in/BCWDHome.aspx
ಸಹಾಯವಾಣಿ ಸಂಖ್ಯೆ: 8050770004
ಅಭ್ಯರ್ಥಿಗಳು ಈ ಬಗೆಗೆ ಪ್ರಕಟಣೆಯನ್ನು ಓದಲು ಇಲ್ಲಿ


Click it and Unblock the Notifications











