ಪಠ್ಯ ಪುಸ್ತಕಗಳಲ್ಲಿ ತಪ್ಪು ಮಾಹಿತಿ: ನಗೆಪಾಟಲಿಗೆ ಈಡಾದ ಶಿಕ್ಷಣ ಇಲಾಖೆ

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ರಿಯೋ ಒಲಂಪಿಕ್ಸ್ ನಲ್ಲಿ ಗೆದ್ದಿದ್ದು ಬೆಳ್ಳಿ ಪದಕವಾದರೆ 10 ನೇ ತರಗತಿ ಪರಿಷ್ಕೃತ ದೈಹಿಕ ಪಠ್ಯ ಪುಸ್ತಕದಲ್ಲಿ ಸಿಂಧೂ ಗೆದ್ದಿರುವುದು ಕಂಚಿನ ಪದಕ ಎಂದು ಮುದ್ರಣವಾಗಿದೆ.

ಪ್ರಸಕ್ತ ಸಾಲಿನ ವರ್ಷದಲ್ಲಿ ಮಕ್ಕಳ ಕೈ ಸೇರಲಿರುವ ಪುಸ್ತಕದಲ್ಲಿ ವಾಸ್ತವಿಕ ದೋಷಗಳು, ವ್ಯಾಕರಣ ತಪ್ಪುಗಳು, ಪುಟಗಳ ಬದಲಾವಣೆ, ತಲೆಕೆಳಗಾಗಿ ಪ್ರಕಟಿತವಾದ ಪುಟಗಳನ್ನು, ಖಾಲಿ ಪುಟಗಳು ಇತ್ಯಾದಿ ದೋಷಗಳು ಕಂಡು ಬಂದಿವೆ.

ಪ್ರೌಢಶಾಲಾ ಪುಸ್ತಕಗಳಲ್ಲಿ ಸಾಕಷ್ಟು ತಪ್ಪುಗಳಿದ್ದು ವಿದ್ಯಾರ್ಥಿಗಳನ್ನು ಸಾಕಷ್ಟು ಗೊಂದಲಕ್ಕೀಡುಮಾಡಿದೆ. ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ಮುದ್ರಣವಾಗಿರುವಂತೆ ಕಳೆದ ವರ್ಷ ನಡೆದ ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ನಲ್ಲಿ ಪದಕ ಪಡೆದವರು ಯಾರು ಎನ್ನುವುದರ ಮಾಹಿತಿ ತಪ್ಪಾಗಿದೆ.

ಪಠ್ಯ ಪುಸ್ತಕಗಳಲ್ಲಿ ತಪ್ಪು ಮಾಹಿತಿ

ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ರಿಯೋ ಒಲಂಪಿಕ್ಸ್ ನಲ್ಲಿ ಗೆದ್ದಿದ್ದು ಬೆಳ್ಳಿ ಪದಕವಾದರೆ 10 ನೇ ತರಗತಿ ಪರಿಷ್ಕೃತ ದೈಹಿಕ ಪಠ್ಯ ಪುಸ್ತಕದಲ್ಲಿ ಸಿಂಧೂ ಗೆದ್ದಿರುವುದು ಕಂಚಿನ ಪದಕ ಎಂದು ಮುದ್ರಣವಾಗಿದೆ. ಅಷ್ಟೇ ಅಲ್ಲದೇ ಅವರು ಕಂಚಿನ ಪದಕ ಪಡೆದ ನಂತರ ಪದ್ಮಶ್ರೀ ಸಿಕ್ಕಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಸಿಂಧೂ ಅವರಿಗೆ 2015 ರಲ್ಲೇ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇನ್ನು WON ಎಂದು ಮುದ್ರಿಸುವ ಬದಲು WONE ಎಂದು ಮುದ್ರಿಸಲಾಗಿದೆ.

10ನೇ ತರಗತಿಯ ಇಂಗ್ಲಿಷ್ ಪಠ್ಯದಲ್ಲಿ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹೆಸರನ್ನು ಸಾನಿಯ ನೆಹ್ವಾಲ್ ಎಂದು ಮುದ್ರಿಸಲಾಗಿದೆ. ಅಲ್ಲದೇ ಕಾಮನ್ ವೆಲ್ತ್ ಪದದಲ್ಲಿ ಎ ಅಕ್ಷರವನ್ನೇ ಕೈ ಬಿಡಲಾಗಿದೆ. ಪರ್ಷಿಯನ್ ಗಲ್ಫ್ ಎಂಬ ಪದದ ಬದಲಿಗೆ ಪ್ರಿಷಿಯನ್ ಗಲ್ಫ್ ಎಂದು ಮುದ್ರಿಸಲಾಗಿದೆ.

ಪಠ್ಯ ಪುಸ್ತಕಗಳಲ್ಲಿ ತಪ್ಪು ಮಾಹಿತಿ

ಈ ವರ್ಷ ಪರಿಷ್ಕರಿಸಿ ಮುದ್ರಿಸಿರುವ ಶಾಲಾ ಪಠ್ಯಪುಸ್ತಕಗಳಲ್ಲಿ ಅನೇಕ ಕಡೆ ದೋಷಗಳು ಕಂಡು ಬಂದಿವೆ. 8 ನೇ ತರಗತಿಯ ಪಠ್ಯ ಪುಸ್ತಕದಲ್ಲೂ ಸಾಕಷ್ಟು ದೋಷಗಳಿವೆ ಇದರಿಂದ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

ಕನ್ನಡ ಪಠ್ಯಪುಸ್ತಕದಲ್ಲಿ ಗಣಿತ

ಸಿರಿ ಕನ್ನಡ ೮ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕದಲ್ಲಿ ಎಂಟು ಪುಟ ಗಣಿತ ವಿಷಯ ಮುದ್ರಣಗೊಂಡಿರುವುದು ಗೊಂದಲ ಸೃಷ್ಠಿಸಿದೆ. ಅಲ್ಲದೇ ಕನ್ನಡ ವಿಷಯದ ಹತ್ತಾರು ಪುಟಗಳು ಮಾಯಾವಾಗಿವೆ. ಕನ್ನಡದ ಪುಸ್ತಕದಲ್ಲಿ 1 ರಿಂದ 22ನೇ ಪಟದವರೆಗೆ ಕನ್ನಡ ವಿಷಯ ಮುದ್ರಣವಾಗಿದೆ. ನಂತರ 26ನೇ ಪುಟದವರೆಗೆ ಗಣಿತದ ವಿಷಯಗಳು ಮುದ್ರಣವಾಗಿವೆ. ಅಲ್ಲದೇ 23 ರಿಂದ 27ರ ವರೆಗಿನ 5 ಪುಟಗಳು ಮಾಯವಾಗಿವೆ.

ಸರ್ಕಾರ ಆದಷ್ಟು ಬೇಗ ತಪ್ಪುಗಳನ್ನು ಸರಿಪಡಿಸಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ನೀಡುವ ವ್ಯವಸ್ತೆ ಮಾಡಬೇಕೆಂದು ಕಾರ್ಯದರ್ಶಿಗಳು ಒತ್ತಾಯಿಸಿದ್ದಾರೆ.

ಇದೇ ಮಾದರಿಯ ತೊಂದರೆ ಕಳೆದ ವರ್ಷವೂ ಕಾಣಿಸಿಕೊಂಡಿತ್ತಾದರೂ ಸರಕಾರ ಮಾತ್ರ ಸರಿ ಪಡಿಸಿಕೊಳ್ಳುವುದಾಗಿ ಸಬೂಬು ನೀಡಿ ಜಾರಿಕೊಂಡಿತ್ತು. ಪ್ರತೀ ಬಾರಿ ಹಲವಾರು ಮುದ್ರಾ ರಾಕ್ಷಸನ ದೋಷವನ್ನು ಒಳಗೊಂಡು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ರವಾನಿಸುವ ಪುಸ್ತಕಗಳ ಕುರಿತು ಅದೆಷ್ಟೇ ದೂರು ನೀಡಿದರೂ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಕೆಲವೊಮ್ಮೆ ಶಿಕ್ಷಕರು ಸರಿಯಾದ ಮಾಹಿತಿ ಇಲ್ಲದೆ ಪಾಠ ಮಾಡುವಾಗ ತಪ್ಪು ಮಾಹಿತಿ ನೀಡುವ ಸಂದರ್ಭಗಳು ಉಂಟಾಗಿವೆ, ಆದರೆ ಶಿಕ್ಷಣಕ್ಕಾಗಿ ಬಳಸುವ ಪಠ್ಯಪುಸ್ತಕಗಳಲ್ಲಿಯೇ ತಪ್ಪು ಮಾಹಿತಿಗಳು ಬಂದರೆ! ಪಾಠ ಮಾಡಿದವರು ಮತ್ತ ಪಾಠ ಕೇಳಿದವರು ಇಬ್ಬರೂ ದಾರಿ ತಪ್ಪುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
upside down printing, ink smudges and factual errors are just a few mistakes that have been found in Government of Karnataka textbooks. Students, teachers and school managements are haggard with the textbooks that are riddled with errors.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X