ಐಐಟಿ ಬಾಂಬೆ ವಿದ್ಯಾರ್ಥಿಗಳು ಡಾಕ್ಯುಮೆಂಟ್ ಸ್ಕ್ಯಾನರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ.
ಸರ್ಕಾರವು ಚೀನಾದ ಬಹುತೇಕ ಆಪ್ಗಳನ್ನು ನಿಷೇಧಿಸಿದ ಬಳಿಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಲು ಸೂಕ್ತ ಆಪ್ ಇರಲಿಲ್ಲ ಹೀಗಾಗಿ ಮೋದಿ ಅವರು ಕರೆ ನೀಡಿರುವ "ಆತ್ಮ ನಿರ್ಭರ್ ಭಾರತ್" ನಿಂದ ಪ್ರೇರಣೆ ಪಡೆದ ವಿದ್ಯಾರ್ಥಿಗಳು ಸ್ಕ್ಯಾನಿಂಗ್ ಆಪ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.
ಸಿವಿಲ್ ಇಂಜಿನಿಯರಿಂಗ್ ಬಿ.ಟೆಕ್ ಅಂತಿಮ ವರ್ಷದಲ್ಲಿರುವ ರೋಹಿತ್ ಕುಮಾರ್ ಚೌಧರಿ ಮತ್ತು ಕೆವಿನ್ ಅಗರ್ವಾಲ್ ವಿದ್ಯಾರ್ಥಿಗಳು ಎಐ ಆಧಾರಿತ ರೀಡಿಂಗ್ ಸಿಸ್ಟಂಟ್ ಮತ್ತು ಡಾಕ್ಯುಮೆಂಟ್ ಸ್ಕ್ಯಾನಿಂಗ್ ಆಪ್ ಅನ್ನು ರಚಿಸಿದ್ದಾರೆ.
ಈ ಆಪ್ ಆಂಡ್ರಾಯ್ಡ್ ಬಳಕೆದಾರರು ಉಪಯೋಗಿಸಬಹುದಾಗಿದ್ದು, ಈ ಆಪ್ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ ಹಾಗೂ ಎಲ್ಲಾ ಡಾಕ್ಯುಮೆಂಟ್ ಗಳು ಫೋನಲ್ಲೆ ಸಂಗ್ರಹವಾಗಲಿವೆ ಎಂದು ರೋಹಿತ್ ಕುಮಾರ್ ಚೌಧರಿ ಹೇಳಿದ್ದಾರೆ.
For Quick Alerts
For Daily Alerts
English summary
Atma Nirbhar Bharat: IIT bombay students launch scanning app AIRScanner