ಇಂದು ದೇಶದೆಲ್ಲೆಡೆ ಶಿಕ್ಷಕರ ದಿನದ ಸಂಭ್ರಮ. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಗುರುತಿಸಲು ದೇಶವು ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನವನ್ನು ಸಮಾಜಕ್ಕೆ ಶಿಕ್ಷಕರು ನೀಡಿದ ಕೊಡುಗೆಗೆ ಗೌರವದ ಸಂಕೇತವಾಗಿ ಆಚರಿಸಲಾಗುತ್ತದೆ .
ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯ್ಕೆಯಾದ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಇಂದು ಗೌರವಿಸಲಾಗುತ್ತಿದೆ. ದೇಶದೆಲ್ಲೆಡೆ ತಮ್ಮ ಕಾರ್ಯ ಕ್ಷಮತೆ ಮತ್ತು ವೃತ್ತಿಯಲ್ಲಿನ ಸಾಧನೆಯನ್ನು ಗಮನಿಸಿಕೊಂಡು ಒಟ್ಟು 47 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರ ಪಟ್ಟಿಯನ್ನು ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದೆ.
2020 ಕ್ಕೆ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತೀರ್ಪುಗಾರರ ತಂಡವು ಎಲ್ಲಾ 36 ರಾಜ್ಯ ಮತ್ತು ಯುಟಿ ಆಯ್ಕೆ ಸಮಿತಿಗಳು ಮತ್ತು 7 ಸಂಸ್ಥೆ ಆಯ್ಕೆ ಸಮಿತಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಿರುಪಟ್ಟಿ ಮಾಡಿದ 153 ಶಿಕ್ಷಕರ ಪಟ್ಟಿಯನ್ನು ಪರಿಶೀಲಿಸಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.