ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಹೊಂದಿದ ನಂತರ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಕಾರಣದಿಂದಾಗಿ ಭಾರತೀಯರಿಗೆ ಈ ದಿನ ಶ್ರೇಷ್ಠ ದಿನವಾಗಿದೆ. ಭಾರತೀಯರು ಪ್ರತೀ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಇಂದು ಪ್ರತಿಯೊಬ್ಬ ಭಾರತೀಯನೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಎಲ್ಲಾ ಮಹನೀಯರನ್ನೂ ಗೌರವಿಸಲೇಬೇಕು ಏಕೆಂದರೆ ನಾವು ಸಾಕಷ್ಟು ಹೋರಾಟ ಮತ್ತು ತ್ಯಾಗಗಳ ನಂತರ ನಮ್ಮ ಸ್ವಾತಂತ್ರ್ಯವನ್ನು ಪಡೆದಿದ್ದೇವೆ.
ಈ ವರ್ಷ ನಾವು 75ನೇ ಸ್ವಾತಂತ್ರ್ಯೋತ್ಸವ ದಿನವನ್ನು ಆಚರಣೆ ಮಾಡುತ್ತಿದ್ದೇವೆ. ಈ ಶುಭಸಂದರ್ಭದಲ್ಲಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಉಲ್ಲೇಖಗಳನ್ನು ಇಲ್ಲಿ ನೀಡಿದ್ದೇವೆ.
ನೇತಾಜಿ ಸುಭಾಷ್ ಚಂದ್ರ ಬೋಸ್
"ಒಬ್ಬ ವ್ಯಕ್ತಿಯು ಒಂದು ಕಲ್ಪನೆಗಾಗಿ ಸಾಯಬಹುದು, ಆದರೆ ಆ ಕಲ್ಪನೆಯು ಅವನ ಮರಣದ ನಂತರ ಸಾವಿರ ಜನರ ಜೀವನದಲ್ಲಿ ಬದುಕುಳಿದಿರುತ್ತದೆ" - ನೇತಾಜಿ ಸುಭಾಷ್ ಚಂದ್ರ ಬೋಸ್
ಬಿ.ಆರ್. ಅಂಬೇಡ್ಕರ್
"ಎಲ್ಲಿಯವರೆಗೆ ನೀವು ಸಾಮಾಜಿಕ ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನಿಂದ ಒದಗಿಸಲಾದ ಯಾವುದೇ ಸ್ವಾತಂತ್ರ್ಯವು ನಿಮಗೆ ಪ್ರಯೋಜನವಾಗುವುದಿಲ್ಲ" - ಬಿ.ಆರ್. ಅಂಬೇಡ್ಕರ್
ಇಂದಿರಾ ಗಾಂಧಿ
"ನಾವು ನಂಬಿದ್ದೆವು ಮತ್ತು ಈಗಲೂ ನಂಬುತ್ತಿದ್ದೇವೆ ನಮ್ಮ ಸ್ವಾತಂತ್ರ್ಯವನ್ನು ವಿಭಜಿಸಲಾಗದು. ಶಾಂತಿ ಅವಿಭಾಜ್ಯವಾಗಿದೆ ಮತ್ತು ಆರ್ಥಿಕ ಸಮೃದ್ಧಿಯು ಅವಿಭಾಜ್ಯವಾಗಿದೆ ಎಂದು ನಾವು ಈಗ ನಂಬುತ್ತೇವೆ." - ಇಂದಿರಾ ಗಾಂಧಿ
ಜವಾಹರಲಾಲ್ ನೆಹರು
"ನಿಮ್ಮ ದೇಶವು ನಿಮಗಾಗಿ ಏನು ಮಾಡಬಹುದು ಎಂದು ಕೇಳಬೇಡಿ. ನಿಮ್ಮ ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ಕೇಳಿ." - ಜವಾಹರಲಾಲ್ ನೆಹರು
ಮಹಾತ್ಮ ಗಾಂಧಿ
"ನೀವು ನಾಳೆ ಸಾಯುವವರಿದ್ದೀರಿ ಎಂಬಂತೆ ಬದುಕಿ. ಶಾಶ್ವತವಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಯಿರಿ" - ಮಹಾತ್ಮ ಗಾಂಧಿ