Kanakadasa Jayanthi Speech In Kannada : ಕನಕದಾಸ ಜಯಂತಿಯಂದು ಕನ್ನಡದಲ್ಲಿ ಭಾಷಣ ಮಾಡಲು ಇಲ್ಲಿದೆ ಸಲಹೆ

ರಾಜ್ಯದಾದ್ಯಂತ ನವೆಂಬರ್ 11ರಂದು ದಾಸ ಸಾಹಿತ್ಯಕ್ಕೆ ವೈಶಿಷ್ಟಪೂರ್ಣವಾದ ಮೆರುಗನ್ನು ತಂದಿತ್ತ ಪಾಂಡಿತ್ಯಪೂರ್ಣ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಅನೇಕ ಶಾಲಾ ಕಾಲೇಜುಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅವುಗಳಲ್ಲಿ ಭಾಷಣ ಸ್ಫರ್ಧೆಯೂ ಒಂದಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಮಕ್ಕಳು ಕನಕದಾಸರ ಕುರಿತು ಭಾಷಣ ಮಾಡಲು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ ಓದಿ ತಿಳಿಯಿರಿ.

ವಿದ್ಯಾರ್ಥಿಗಳು ಕನಕದಾಸ ಜಯಂತಿಯಂದು ಕನ್ನಡದಲ್ಲಿ ಭಾಷಣ ಮಾಡಲು ಇಲ್ಲಿದೆ ಸಲಹೆ

ಮಹಾನ್ ಕವಿ, ಸಂತ, ತತ್ವಜ್ಞಾನಿ, ಸಂಯೋಜಕ, ಸಂಗೀತಗಾರ ಮತ್ತು ದಾರ್ಶನಿಕ ಎಂಬ ಬಿರುದಾಂಕಿತ ಕನಕದಾಸರ ಜನ್ಮದಿನದವನ್ನು ನಾವಿಂದು ಆಚರಿಸುತ್ತಿದ್ದೇವೆ. ಕನಕದಾಸರ ಸರಳ ಕೀರ್ತನೆಗಳು ಅಂದಿಗೂ ಇಂದಿಗೂ ಪ್ರಸ್ತುತ.

ಕನಕದಾಸರು ಕರ್ನಾಟಕ ಸಂಗೀತದ ಸ್ತಂಭಗಳು ಮತ್ತು ಕೊಡುಗೆದಾರರಲ್ಲಿ ಪ್ರಮುಖರು ಎಂದು ಪರಿಗಣಿಸಲಾಗಿದೆ. ಅವರ ಉಪಭೋಗ ಮತ್ತು ಕೀರ್ತನೆಗಳು ಹೆಚ್ಚು ಜನಪ್ರಿಯವಾಗಿವೆ.

ಕನಕದಾಸರು ನವೆಂಬರ್ 6, 1509 ರಂದು ಕಾಗಿನೆಲೆ ಬಳಿ ಬ್ರಾಹ್ಮಣೇತರ ಬುಡಕಟ್ಟಿನಲ್ಲಿ ಜನಿಸಿದರು ಮತ್ತು 1609 ರಲ್ಲಿ ನಿಧನರಾದರು. ಅವರು ಯಾವುದೇ ಒಂದು ಜಾತಿ, ಧರ್ಮ, ಪ್ರದೇಶ, ಭಾಷೆಯಿಂದ ದೂರ ಉಳಿದವರು, ಎಲ್ಲರಲ್ಲೂ ಭಕ್ತಿಯನ್ನು ಸಾರಿದವರು. ಭಗವಾನ್ ನಾರಾಯಣ ಅಥವಾ ಹರಿ ಭಕ್ತಿಯನ್ನು ಸುಲಭವಾಗಿ ಕನ್ನಡದಲ್ಲಿ ಬೋಧಿಸಿದವರು. ತಮ್ಮ ಸಂಗೀತ ಸಂಯೋಜನೆಗಳಿಂದ ಹೆಚ್ಚು ಪ್ರಸಿದ್ಧರಾದರು.

ಕನಕದಾಸರು ಕರ್ನಾಟಕದಲ್ಲಿ ನಡೆದ ಹರಿದಾಸ ಭಕ್ತಿ ಚಳುವಳಿಯ ಭಾಗವಾದರು. ತದನಂತರ ಇದರಿಂದ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಕಲೆಯನ್ನು ರೂಪಿಸಲು ಸಹಾಯವಾಯಿತು. ಈ ಆಂದೋಲನವು ದಕ್ಷಿಣ ಭಾರತದ ಜನರು ಮತ್ತು ಸಾಮ್ರಾಜ್ಯಗಳಲ್ಲಿ ಆಧ್ಯಾತ್ಮಿಕ ಪ್ರಭಾವವನ್ನು ಬೀರಿತು. ಕರ್ನಾಟಕದಲ್ಲಿ ಭಕ್ತಿ ಸಾಹಿತ್ಯವನ್ನು ಜನರಿಗೆ ಉಣಬಡಿಸಿದ್ದರಿಂದ ಇದು ಒಂದು ದೊಡ್ಡ ಸಾಹಿತ್ಯ ಚಳುವಳಿಯಾಗಿ ಹೊರಹೊಮ್ಮಿತು. ಶ್ರೀ ಕನಕದಾಸರು ಈ ಚಳವಳಿಯ ಅವಿಭಾಜ್ಯ ಅಂಗವಾದರು.

ಕನಕದಾಸರು ಜಾತಿ ಧರ್ಮಗಳಿಂದ ದೂರ ಉಳಿದು ಕನ್ನಡ ಸಾಹಿತ್ಯಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಕೆಲವು ಶ್ರೇಷ್ಠ ಕೃತಿಗಳೆಂದರೆ ಹರಿಭಕ್ತಿಸಾರ, ಮೋಹನತರಂಗಿಣಿ, ನರಸಿಂಹ ತವ, ರಾಮಧಾನ್ಯ ಚರಿತ್ರೆ ಮತ್ತು ನಳ ಚರಿತ್ರ.

ಅಂತಹ ಮಹಾನ್ ಸಂತನ ಜನ್ಮದಿನವು ಪ್ರತಿ ವರ್ಷ ಕಾರ್ತಿಕ ಹಿಂದೂ ತಿಂಗಳಲ್ಲಿ ಬರಲಿದ್ದು, ಸಾಮಾನ್ಯವಾಗಿ ನವೆಂಬರ್ ನಲ್ಲಿ ಆಚರಿಸಲಾಗುತ್ತದೆ. ಎಲ್ಲೆಡೆ ಈ ದಿನವನ್ನು ಅತ್ಯಂತ ಸಂಭ್ರಮ ಮತ್ತು ಹೆಚ್ಚು ಗೌರವಯುತವಾಗಿ ಆಚರಿಸಲಾಗುತ್ತದೆ.

ಕರ್ನಾಟಕ ಸರ್ಕಾರವು ಈ ಮಹಾನ್ ಸಂತನಿಗೆ ಗೌರವ ಸಲ್ಲಿಸಲು ಈ ದಿನವನ್ನು ರಾಜ್ಯ ರಜಾದಿನವಾಗಿ ಆಚರಿಸುತ್ತದೆ. ರಾಜ್ಯದಾದ್ಯಂತದ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳಲ್ಲಿ ಶ್ರೀ ಕನಕ ದಾಸ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Kanakadasa Jayanthi 2022 : Here are the Kanakadasa jayanti speech in kannada for students and children. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X