ಕರ್ನಾಟಕದಲ್ಲಿ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ಎಂಬ ಏಕೈಕ ರಾಜ್ಯವನ್ನು ರಚಿಸಲಾಯಿತು ಈ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಲ್ಲಿ ಸರ್ಕಾರಿ ರಜೆ ಎಂದು ಘೋಷಿಸಲಾಗಿದೆ ಮತ್ತು ಈ ದಿನವನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂದೂ ಕರೆಯಲಾಗುತ್ತದೆ. ಇಂದಿನ ದಿನ ನಾನು ನಿಮಗೆ ಗೊತ್ತಿರದ ಅಥವಾ ಆಸಕ್ತಿದಾಯಕ ಸಂಗತಿಗಳನ್ನು ತಿಳಿಸಬಯಸುತ್ತೇನೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ರಚನೆ ಹಿಂದಿರುವ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯಿರಿ.
* ಭಾರತದ ರಾಜಕಾರಣಿ, ಬರಹಗಾರ, ಪತ್ರಕರ್ತ, ಕ್ರಾಂತಿಕಾರಿ ಮತ್ತು ಇತಿಹಾಸಕಾರ ಆಲೂರು ವೆಂಕಟ ರಾವ್ ಅವರು ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನಾಗಿ ಮಾಡುವ ಕನಸು ಕಂಡಿದ್ದರು.
* ಆಲೂರು ವೆಂಕಟ ರಾವ್ ಅವರು 1905 ರಲ್ಲಿ ಕನ್ನಡ ಏಕೀಕರಣ ಚಳವಳಿಯ ಸಮಯದಲ್ಲಿ ಕರ್ನಾಟಕ ರಾಜ್ಯವನ್ನು ರಚಿಸಲು ಬಯಸಿದ್ದರು.
* ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ 195೬ ರಲ್ಲಿ ದೇಶದಲ್ಲಿ ಹಲವಾರು ರಾಜ್ಯಗಳನ್ನು ರಚಿಸಲಾಯಿತು. ಪ್ರತಿಯೊಂದು ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಗಳು ಮತ್ತು ಸಂಸ್ಕೃತಿಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಗಿದೆ.
* ನವೆಂಬರ್ 1,1956 ರಂದು ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಆಗಿನ ರಾಜ ಮನೆತನಗಳು ರಾಜ್ಯವನ್ನು ಆಳುತ್ತಿದ್ದವು.
* ಏಕೀಕೃತ ಕನ್ನಡ-ಮಾತನಾಡುವ ರಾಜ್ಯವನ್ನು ರೂಪಿಸಲು ಸಲುವಾಗಿ ಮೈಸೂರು ರಾಜ್ಯವನ್ನು ಮಾಡಲಾಯಿತು.
* ಅಂದು ಹೊಸದಾಗಿ ರೂಪುಗೊಂಡ ರಾಜ್ಯವನ್ನು ಮೈಸೂರು ಎಂದು ಕರೆಯಲಾಗುತ್ತಿತ್ತು. ಆದರೆ ಇದು ಸಂಸ್ಥಾನದೊಂದಿಗೆ ಸಂಬಂಧ ಹೊಂದಿದ್ದರಿಂದ ಉತ್ತರ ಕರ್ನಾಟಕಕ್ಕೆ ಸೇರಿದವರು ಇದನ್ನು ವಿರೋಧಿಸಿದರು.
* ಅನೇಕ ಕಾರಣಗಳಿಂದಾಗಿ ನವೆಂಬರ್ 1,1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
* ಅಂದು ದೇವರಾಜ್ ಅರಸು ಅವರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು.
* ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಕರೆಯಲಾಗುತ್ತದೆ ಅಂದರೆ ಇದೊಂದು ರಾಜ್ಯದ ಹಬ್ಬ.
* ಈ ದಿನದಂದು ಇಡೀ ರಾಜ್ಯವು ಕೆಂಪು ಮತ್ತು ಹಳದಿ ಬಣ್ಣದ ಧ್ವಜಗಳಿಂದ ಅಲಂಕರಿಸಿರುತ್ತದೆ. ಇದು ಹಬ್ಬದಂತೆ ಕಣ್ಣಿಗೆ ಮತ್ತು ಮನಸ್ಸಿಗೆ ಬಿಂಬಿಸುತ್ತದೆ.
* ರಾಜ್ಯದ ವಿವಿಧ ಸ್ಥಳಗಳಲ್ಲಿ ಕನ್ನಡ ಧ್ವಜಗಳನ್ನು ಹಾರಿಸಲಾಗುತ್ತದೆ ಮತ್ತು ರಾಜ್ಯದ ಕನ್ನಡ ಗೀತೆಯನ್ನು ಹಾಡಲಾಗುತ್ತದೆ.
* ಈ ದಿನ ಹಲವಾರು ಯುವಕರು ವಿವಿಧ ವಾಹನಗಳಲ್ಲಿ ಮೆರವಣಿಗೆಗಳನ್ನು ನಡೆಸುತ್ತಾರೆ.
* ಸಾಮಾನ್ಯವಾಗಿ ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಧ್ವಜಗಳನ್ನು ಹಾರಿಸಲಾಗುತ್ತದೆ.
* ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸಿದ ಜನರಿಗೆ ರಾಜ್ಯ ಸರ್ಕಾರವು ಇಂದು ಪ್ರಶಸ್ತಿ ನೀಡಿ ಗೌರವಿಸುತ್ತದೆ.
* ಪ್ರತಿ ವರ್ಷ ಈ ದಿನದಂದು ಬೆಂಗಳೂರಿನ ಕ್ರಾಂತಿವೀರ ಕ್ರೀಡಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿಯವರು ಉದ್ಘಾಟಿಸುತ್ತಾರೆ.