ಕೆಲಸ ಕೆಲಸ ಎಂದು ನೀವು ಪ್ರತೀ ದಿನ ಅಲೆದಾಡುತ್ತಿದ್ದೀರಾ... ಅಥವಾ ಯಾವುದಾದ್ರೂ ಬ್ಯುಸಿನೆಸ್ ಗೆ ಕೈ ಹಾಕಿ ಕೈ ಸುಟ್ಟುಕೊಂಡಿದ್ದೀರಾ ಅಷ್ಟೇ ಯಾಕೆ ಆಫೀಸ್ನಲ್ಲಿ ಸದಾ ಕಿರಿ ಕಿರಿಯ ವಾತಾವರಣ ಸೃಷ್ಟಿಯಾಗಿದೆಯೇ. ಹಾಗಿದ್ರೆ ನಿಮಗಿಲ್ಲದಿ ವಾಸ್ತು ಸಲಹೆ. ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಪರಿಹಾರವಾಗ ಬೇಕಾದ್ರೆ ನೀವು ಮೊದಲಿಗೆ ಶನಿ ದೇವನ ಕೃಪೆಗೆ ಪಾತ್ರರಾಗಬೇಕು.

ಶನಿ ಸೂರ್ಯ ದೇವನ ಮಗ. ಆಸ್ಟ್ರೋಲಾಜಿ ಪ್ರಕಾರ ಉತ್ತಮ ಕೆರಿಯರ್ ಜೀವನ, ನಿಮ್ಮದಾಗಬೇಕಾದ್ರೆ ಶನಿಯ ಅನುಗ್ರಹ ನಿಮ್ಮ ಮೇಲಿರಬೇಕು. ಅದಕ್ಕಾಗಿ ಶನಿಯ ಕೃಪೆಗೆ ನೀವು ಹೇಗೆ ಪಾತ್ರರಾಗ ಬೇಕೆಂದು ನಿಮಗೆ ಕೆರಿಯರ್ ಇಂಡಿಯಾ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.
1 ಮಣ್ಣಿನ ಹಣತೆ ದೀಪ
ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಎರಡೂ ಕಡೆ ಮಣ್ಣಿನ ಹಣತೆಯಲ್ಲಿ ದೀಪವಿಡಿ. ಇದು ನಿಮ್ಮ ಮನೆಗೆ ನೆಗಟೀವ್ ಎನರ್ಜಿ ಎಂಟ್ರಿ ಆಗುವುದನ್ನ ತಪ್ಪಿಸುತ್ತದೆ.
2. ದೇವರಿಗೆ ದೀಪ
ಹೌದು ಮನೆಯಲ್ಲಿ ಪ್ರತೀ ದಿನ ದೇವರ ಗುಡಿಯಲ್ಲಿ ದೀಪ ಹತ್ತಿಸಿ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುವುದು
3. ತುಳಸಿಗೆ ದೀಪ
ಸಂಜೆ ಸೂರ್ಯಸ್ತಮಾನದ ನಂತರ ತುಳಸಿಗೆ ಮಣ್ಣಿನ ಹಣತೆಯಲ್ಲಿ ದೀಪಹಚ್ಚಿಡಿ. ಇನ್ನೂ ಅಮವಾಸ್ಯೆ ದಿನದಂದು ತಪ್ಪದೇ ದೀಪವಿಡಿ. ಇದರಿಂದ ದೇವತೆಗಳು ನಿಮ್ಮ ಮನೆಯತ್ತ ಆಕರ್ಷಿತರಾಗುತ್ತಾರೆ.
4 ಮೇಲ್ಚಾವಣಿಯತ್ತನೂ ಇರಲಿ ಗಮನ
ಮನೆಯ ಟಾರೆಸ್ ಇಲ್ಲ ಮೇಲ್ಚಾವಣಿಯನ್ನ ಯಾವತ್ತೂ ಕಡೆಗಣಿಸಬೇಡಿ. ವಿಶೇಷವಾಗಿ ಅಮವಾಸ್ಯೆ ದಿನದಂದು ಟಾರೆಸ್ ಮೇಲೆ ೪ ಅಥವಾ ೫ ಮಣ್ಣಿ ಹಣತೆಯಲ್ಲಿ ದೀಪವಿಡಿ ಇಲ್ಲವೆಂದಾದ್ರೆ ಒಂದು ಬಲ್ಬ್ ಉರಿಸಿ ಇಡಿ. ಇದರಿಂದ ನಿಮ್ಮ ಮನೆಯತ್ತ ನೆಗಟೀವ್ ಎನರ್ಜಿ ಸುಳಿಯುವುದಿಲ್ಲ.
5 ಅಶ್ವಥ ಮರಕ್ಕೆ ದೀಪ
ನಿಮ್ಮ ಮನೆ ಸುತ್ತ ಅಶ್ವಥ ಮರವಿದ್ದರೆ ಪ್ರತೀ ದಿನ ಮುಂಜಾನೆ ಎದ್ದು ಆ ಮರದ ಬಳಿ ಹೋಗಿ ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಿ. ಇದರಿಂದ ನಿಮಗೆ ಯಾವುದೇ ಶನಿ ದೋಷವಿದ್ದರೂ ಪರಿಹಾರವಾಗುವುದು. ಉದ್ಯೋಗದಲ್ಲಿ ಪ್ರಗತಿಯಾಗುವುದು


Click it and Unblock the Notifications











