No Mid Day Meals: ಕೊರೋನಾ ಕಾರಣದಿಂದಾಗಿ ಮಿಡ್ ಡೇ ಮೀಲ್ ನಿಂದ ವಂಚಿತರಾದ ಮಕ್ಕಳು

ಯಡಿಯೂರಪ್ಪನವರ ಆಡಳಿತದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಿದ್ಯಾಗಮ ಎಂಬ ಕಲಿಕಾ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ ಒಂದು ವಾರದ ನಂತರ, ಅವರ ಕುಟುಂಬಗಳಿಗೆ ಮಧ್ಯಾಹ್ನದ ಊಟ ನೀಡುವ ಕುರಿತು ಭರವಸೆ ನೀಡಿದ್ದರು ಆದರೆ ಅವರು ಮಾಸಿಕ ಆಹಾರ ಧಾನ್ಯಗಳ ಕೋಟಾವನ್ನು ಪಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಪೌಷ್ಠಿಕ ಆಹಾರದ ಕೊರತೆ ಇನ್ನು ಶಾಲೆಗಳು ತೆರೆಯುವುದು ಯಾವಾಗ ?

ಬಡ ಮಕ್ಕಳು ಶಾಲೆಗಳಿಂದ ಹೊರಗುಳಿಯುವುದು, ಮಧ್ಯಾಹ್ನದ ಊಟವನ್ನು ನಿರಾಕರಿಸುವುದು ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ನಗರ ಪ್ರದೇಶಗಳ ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಗಳು ಆನ್‌ಲೈನ್ ಶಿಕ್ಷಣದ ವಂಚಿತರಾಗಿದ್ದಾರೆ. ಈ ಕುರಿತು ಶಿಕ್ಷಣ ನಿರ್ವಾಹಕರು ಮತ್ತು ಮಕ್ಕಳ ಬಲ ಕಾರ್ಯಕರ್ತರನ್ನು ಚಿಂತೆಗೀಡುಮಾಡಿದೆ. ಆದರೆ ಕಡಿಮೆ-ಅಪಾಯವಿರುವ ಕೋವಿಡ್ -19 ಪ್ರದೇಶಗಳಲ್ಲಿ ತರಗತಿಗಳನ್ನು ಪುನರುಜ್ಜೀವನಗೊಳಿಸುವ ಯಾವುದೇ ದುರ್ಬಲ ಪ್ರಯತ್ನಗಳಿಗೆ ತೀವ್ರ ಪ್ರತಿರೋಧ ಎದುರಾಗಿದೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ಪ್ರತಿದಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 56 ಲಕ್ಷ ಮಕ್ಕಳಿಗೆ ಮಧ್ಯಾಹ್ನ ಊಟ ನೀಡುವ ಕಾರ್ಯಕ್ರಮವು ಆಹಾರವನ್ನು ನೀಡಿತು. ಆದರೆ ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸಲು ಮಾರ್ಚ್ ಅಂತ್ಯದಲ್ಲಿ ಸರ್ಕಾರವು ಜಾರಿಗೊಳಿಸಿದ ಲಾಕ್‌ಡೌನ್‌ ನಿಂದಾಗಿ ಊಟ ನೀಡುವುದು ನಿಂತಿದೆ. ಆದರೆ ಬಿಸಿ ಊಟಕ್ಕೆ ಸರಿದೂಗಿಸಲು ಸರ್ಕಾರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶಾಲಾ ಮಕ್ಕಳ ಕುಟುಂಬಗಳಿಗೆ 3 ಕೆಜಿ ಅಕ್ಕಿ ಮತ್ತು ಪ್ರತಿ ಮಗುವಿಗೆ 1 ಕೆಜಿ ದಾಲ್ ದರದಲ್ಲಿ ಒಣ ಪಡಿತರ ಕಿಟ್‌ಗಳನ್ನು ವಿತರಿಸಿತು. ಆದರೆ ಈ ಕಿಟ್ ನೀಡುವ ಪ್ರಕ್ರಿಯೆಯು ಆ ಕುಟುಂಬಗಳಿಗೆ ಯಾವುದೇ ಸೂಚನೆ ನೀಡದೆ ಜೂನ್ ತಿಂಗಳಿನಿಂದ ನಿಂತಿದೆ. ಆದರೆ ಈ ಕುರಿತು ಹಣಕಾಸು ಇಲಾಖೆಯು ಪ್ರಶ್ನೆಗಳನ್ನು ಎತ್ತಿದ ನಂತರ ಈ ವಿಚಾರ ತಿಳಿದು ಬಂದಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಹಣಕಾಸು ಇಲಾಖೆಯು ಅನುಮತಿ ನೀಡಿದರೆ ಶಿಕ್ಷಣ ಇಲಾಖೆಯು ಸರಬರಾಜುಗಳನ್ನು ಪುನಃಸ್ಥಾಪಿಸುತ್ತದೆ. ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡಲು ಸರ್ಕಾರ ಕರ್ನಾಟಕ ಸಹಕಾರಿ ಹಾಲು ಒಕ್ಕೂಟ (ಕೆಎಂಎಫ್) ಯೊಂದಿಗೆ ಮಾತನಾಡುತ್ತಿದೆ "ಶೀಘ್ರದಲ್ಲೇ ಮಕ್ಕಳ ಮನೆ ಬಾಗಿಲಿಗೆ ಹಾಲಿನ ಪುಡಿಯನ್ನು ನೀಡಲಾಗುವುದು" ಎಂದು ಸಚಿವರು ಹೇಳಿದ್ದಾರೆ.

ಆದರೆ ಶಾಲೆಗೆ ಹೋಗುವ ಮಕ್ಕಳಿಗೆ ಈಗ ಏಳು ತಿಂಗಳಿನಿಂದ ಗುಣಮಟ್ಟದ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗಿಲ್ಲ ಮತ್ತು ತರಗತಿಗಳು ಯಾವಾಗ ಪುನರಾರಂಭಗೊಳ್ಳುತ್ತವೆ ಎಂಬುದು ನಿಖರವಾಗಿ ತಿಳಿದಿಲ್ಲ ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಳವಳ ಉಂಟಾಗಿದೆ. ಕಡಿಮೆ ಆದಾಯದ ಕುಟುಂಬಗಳ ಹತ್ತಾರು ಮಕ್ಕಳಿಗೆ, ಶಾಲಾ ಆಹಾರ ಕಾರ್ಯಕ್ರಮದಡಿಯಲ್ಲಿ ಬಿಸಿ ಹಾಲು ಮತ್ತು ಊಟ ಮಾತ್ರವೇ ಪೌಷ್ಠಿಕ ಆಹಾರದ ಮೂಲವಾಗಿತ್ತು. ಮಧ್ಯಾಹ್ನ ಊಟ ಯೋಜನೆ ಹಸಿವನ್ನು ನೀಗಿಸುವಲ್ಲಿ ಮತ್ತು ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ.

ಒಣ ಪಡಿತರವು ಬಿಸಿ ಬೇಯಿಸಿದ ಆಹಾರಕ್ಕೆ ಬದಲಿಯಾಗಲು ಸಾಧ್ಯವಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಮಾಡಬೇಕಾದ ಮೊದಲ ಕೆಲಸವೆಂದರೆ ಸರ್ಕಾರಿ ಶಾಲೆಗಳನ್ನು ತೆರೆಯುವುದು ಮತ್ತು ಮಧ್ಯಾಹ್ನದ ಊಟವನ್ನು ಪುನರಾರಂಭಿಸುವುದು "ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ಅಧ್ಯಾಪಕ ಸದಸ್ಯ ನಿರಂಜನ್ ಆಧ್ಯಾಯ ಹೇಳಿದ್ದಾರೆ. ಮಕ್ಕಳ ಹಕ್ಕುಗಳ ಕಾರ್ಯಕರ್ತ ಆರಾಧ್ಯ ರವರು ಒಡಿಶಾ ರಾಜ್ಯವು ಮಧ್ಯಾಹ್ನ ಊಟಕ್ಕೆ ಆಹಾರ ನೀಡುವಲ್ಲಿ ಧಾನ್ಯಗಳ ಪ್ರಮಾಣವನ್ನುಹೆಚ್ಚಿಸಿದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. "ಆದರೆ ಕರ್ನಾಟಕದಲ್ಲಿ, ಮಕ್ಕಳ ಕುಟುಂಬಗಳಿಗೆ ಅಕ್ಕಿ ಮಾತ್ರ ದೊರೆತ ಉದಾಹರಣೆಗಳಿವೆ."

ಬಡತನದ ರೇಖೆಯು ಹೆಚ್ಚಾಗುತ್ತಿದ್ದಂತೆ, ಬಡ ಕುಟುಂಬಗಳು ವಿದ್ಯಾರ್ಥಿಗಳನ್ನು ಕೃಷಿ ಕೆಲಸಗಳಿಗೆ ಅಥವಾ ಇತರ ರೀತಿಯ ದುಡಿಮೆ ಮಾಡಲು ಹಚ್ಚುತ್ತಾರೆ ಮತ್ತು ಅಪ್ರಾಪ್ತ ಬಾಲಕಿಯರನ್ನು ಮದುವೆ ಮಾಡುತ್ತಾರೆ ಏಕೆಂದರೆ ಈ ಮಕ್ಕಳಿಗೆ ಸರ್ಕಾರವು ಎಲ್ಲಾ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ಬಂಧಿಸಿದೆ ಎಂದು ಆರಾಧ್ಯ ಹೇಳಿದರು.

ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ನಾಗಸಿಂಹ ರಾವ್ ಮಾತನಾಡಿ, ಕರೋನವೈರಸ್ ಸೋಂಕಿನ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಪಡೆಯುವುದು ಮುಖ್ಯವಾಗಿದೆ. "ಅವರು ಹಾಲು, ಆಹಾರ, ಮೊಟ್ಟೆ ಮತ್ತು ಅಂತಹ ಎಲ್ಲ ಅಗತ್ಯ ವಸ್ತುಗಳಿಂದ ವಂಚಿತರಾಗಿದ್ದಾರೆ. ಯುನಿಸೆಫ್ ಸೂಚಿಸಿದಂತೆ ಸರ್ಕಾರವು ಕನಿಷ್ಠ ವಿಟಮಿನ್ ಕ್ಯಾಪ್ಸುಲ್ ಮತ್ತು ಪ್ರೋಟೀನ್ ಬಿಸ್ಕತ್ತುಗಳನ್ನು ಪೂರೈಸಲು ಪ್ರಾರಂಭಿಸಬೇಕು " ಎಂದಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Covid-19 Effect: No school, no mid day meals or ration to childrens in Karnataka. Know more.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+