ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2017-18ನೇ ಸಾಲಿನಲ್ಲಿ ಪ್ರೋತ್ಸಾಹ ಧನಸಹಾಯಕ್ಕಾಗಿ ಆನ್-ಲೈನ್ ಆರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಹಾಗೂ ಕಲಾ ಪರಂಪರೆಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಧನಸಹಾಯವನ್ನು ನೀಡಲಾಗುತ್ತಿದೆ.
ಧನಸಹಾಯ ಮಂಜೂರಾತಿ ಮಾಡಲು ಕೆಲವು ನಿರ್ದಿಷ್ಠ ಮಾನದಂಡಗಳನ್ನು ವಿಧಿಸಿ, ನಿಯಮಾನುಸಾರ ಅರ್ಹವಾದ ಸಂಘ-ಸಂಸ್ಥೆಗಳಿಂದ ಜಿಲ್ಲಾ ಹಂತಗಳಲ್ಲಿ ಅರ್ಜಿ ಅಹ್ವಾನಿಸಿ, ಪರಿಶೀಲಿಸಿ, ಯೋಜನೆ ಮತ್ತು ಸಂಸ್ಥೆಯ ಕಾರ್ಯಕ್ಷಮತೆಯ ಆಧಾರದಲ್ಲಿ ಧನಸಹಾಯ ಮಂಜೂರಾತಿ ಮಾಡಲು ಅನುದಾನ ಮಂಜೂರಾತಿ ಸಮಿತಿ ರಚಿಸಲಾಗಿದೆ.
ಸೂಚನೆ
- ಇಲಾಖೆಯ ಅಂತರ್ಜಾಲದ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
- ರಾಜ್ಯ ಮತ್ತು ಹೊರರಾಜ್ಯಗಳ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳು ಆನ್-ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸುವುದು.
- ಅರ್ಹ ಮತ್ತು ಆಸಕ್ತ ಅರ್ಜಿದಾರರು ತಮ್ಮ ಅರ್ಜಿಗಳನ್ನು ದಿನಾಂಕ: 15-07-2017 ರಿಂದ 09-08-2017 ರವರೆಗೆ ಸಲ್ಲಿಸಲು ಅವಕಾಶವಿರುತ್ತದೆ. (ಬಿಟ್ಟು ಹೋದ ದಾಖಲೆಗಳನ್ನು ಸಲ್ಲಿಸಲು ದಿನಾಂಕ: 14-08-2017 ರವರೆಗೆ ಅವಕಾಶವಿರುತ್ತದೆ)
- ಸಲ್ಲಿಕೆಯಾದ ಅರ್ಜಿ ಮತ್ತು ದಾಖಲೆಗಳನ್ನು ಆಯಾ ಜಿಲ್ಲಾ ಸಹಾಯಕ ಸಹಾಯಕ ನಿರ್ದೇಶಕರು ನಿಗದಿತ ದಿನಾಂಕಗಳಂದು ಪರಿಶೀಲಿಸಿ ರಾಜ್ಯ ಸಮಿತಿಯ ಮುಂದೆ ಮಂಡಿಸಿ ನಂತರ ಧನ ಸಹಾಯದ ಮೊತ್ತವನ್ನು ನಿರ್ಧರಿಸಿ, ಆರ್.ಟಿ.ಜಿ.ಎಸ್ ಮೂಲಕ ಸಂಬಂಧಿತ ಸಂಸ್ಥೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
- ಆಯ್ಕೆಯಾದ ಸಂಘ ಸಂಸ್ಥೆಗಳು ಸಮಾಜಿಕ ತಪಾಸಣೆಗೆ ಒಳಪಡುತ್ತವೆ.
ಹೆಚ್ಚಿನ ವಿವರವಗಳಿಗಾಗಿ www.siri.kannadasiri.co.in ಗಮನಿಸಿ
ಪ್ರತಿ ವರ್ಷ ಸುಮಾರು 1000ಕ್ಕೂ ಹೆಚ್ಚಿನ ಸಂಘ- ಸಂಸ್ಥೆಗಳಿಗೆ ಅವುಗಳ ಚಟುವಟಿಕೆ ನಡೆಸಲು ಧನಸಹಾಯ , ಚಿತ್ರ ಕಲಾವಿದರು ಮತ್ತು ಶಿಲ್ಪ ಕಲಾವಿದರಿಗೆ ಅವರ ಕೃತಿಗಳ ಪ್ರದರ್ಶನ ನಡೆಸಲು ಧನಸಹಾಯ, ಅಸಂಘಟಿತ ಜನಪದ ಮತ್ತು ಸಂಗೀತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣ ಖರೀದಿಗೆ ಧನಸಹಾಯ ಹೀಗೆ ವಿವಿಧ ಪ್ರಕಾರಗಳಲ್ಲಿ ಮನವಿಗಳನ್ನು ಪರಿಶೀಲಿಸಿ ಧನಸಹಾಯ ನೀಡಲಾಗುತ್ತದೆ.