ಜನತಾ ಕರ್ಫ್ಯೂ: ಮಾ.22ರಂದು ವಿದ್ಯಾರ್ಥಿಗಳು ಈ 5 ಕೆಲಸಗಳನ್ನು ತಪ್ಪದೇ ಮಾಡಿ

ಜಗತ್ತಿನಾದ್ಯಂತ 2.5 ಲಕ್ಷಕ್ಕೂ ಅಧಿಕ ಜನರು ಕೊರೊನಾ ವೈರಸ್‌ (ಕೊವಿಡ್19) ಸೋಂಕಿಗೆ ಒಳಗಾಗಿದ್ದಾರೆ ಅದರಲ್ಲಿ 11,000ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಇನ್ನು ಭಾರತದಲ್ಲಿ 235 ಜನ ಈ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಹಾಗಾಗಿ ಪ್ರಧಾನಿ ಮೋದಿ ಮಾರ್ಚ್ 22 ರಂದು ಜನತಾ ಕರ್ಫ್ಯು ಮಾಡುವಂತೆ ಸೂಚಿಸಿದ್ದಾರೆ.

ಮಾರ್ಚ್ 22ರಂದು ವಿದ್ಯಾರ್ಥಿಗಳು ಈ 5 ಕೆಲಸಗಳನ್ನು ಮಾಡಿ

ಕೊರೊನಾ ಭೀತಿಯಿಂದಾಗಿ ಸಿಬಿಎಸ್ಇ ಸಿಐಎಸ್ಸಿಇ ಪರೀಕ್ಷೆಗಳು ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಹಾಗಾಗಿ ಮಾರ್ಚ್ 22ರ ಜನತಾ ಕರ್ಫ್ಯೂ ದಿನದಂದು ವಿದ್ಯಾರ್ಥಿಗಳು ಈ ಕೆಲಸಗಳನ್ನು ಮಾಡಬಹುದು.

ಮಾರ್ಚ್ 22ರಂದು ವಿದ್ಯಾರ್ಥಿಗಳು ಈ 5 ಕೆಲಸಗಳನ್ನು ಮಾಡಿ

ಜನತಾ ಕರ್ಫ್ಯೂ ಎಂದರೇನು?:

ಜನತಾ ಕರ್ಫ್ಯೂ ಅಂದರೆ ನಮಗೆ ನಾವೇ ಬಂಧನ ಹಾಕಿಕೊಳ್ಳುವುದು ಎಂದರ್ಥ. ಮಾರ್ಚ್ ೨೨ ರಂದು ಬೆಳಿಗ್ಗೆ ೭ ರಿಂದ ರಾತ್ರಿ ೯ಗಂಟೆಯ ವರೆಗೆ ಸಾರ್ವಜನಿಕರು ಮನೆಯೊಳಗೇ ಇರುವಂತೆ ಹಾಗೂ ಮನೆಯಿಂದ ಹೊರಗೆ ಹೋಗದಿರಲು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ. ಮಾರ್ಚ್ ೨೨ರ ಭಾನುವಾರ ಸಂಜೆ ೫ ಗಂಟೆಗೆ ಸಾರ್ವಜನಿಕರು ಮನೆಯಲ್ಲೇ ಚಪ್ಪಾಳೆ ತಟ್ಟುವ ಮೂಲಕ ಎಮರ್ಜೆನ್ಸಿ ಯಲ್ಲಿ ಕೂಡ ಸೇವೆ ಸಲ್ಲಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ಮಾರ್ಚ್ 22ರಂದು ಜನತಾ ಕರ್ಫ್ಯೂ: ವಿದ್ಯಾರ್ಥಿಗಳು ಈ 5 ಪ್ರಮುಖ ಕೆಲಸಗಳನ್ನು ಮಾಡಿ

* ವಿದ್ಯಾರ್ಥಿಗಳು ಮೊದಲು ವೇಳಾಪಟ್ಟಿಯನ್ನು ತಯಾರಿಸಿ:
ಕೊರೊನಾ ಭೀತಿಯಿಂದಾಗಿ ಅನೇಕ ಬೋರ್ಡ್ ಪರೀಕ್ಷೆಗಳು ಸೇರಿದಂತೆ ಸಿಬಿಎಸ್ಇ ಮತ್ತು ಸಿಐಎಸ್ಸಿಇ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೇಗೆ ಅಧ್ಯಯನ ಮಾಡಬೇಕು ಎಂದು ಒಂದು ವೇಳಾಪಟ್ಟಿಯನ್ನು ರಚಿಸಿಕೊಳ್ಳಿ.

* ಆನ್‌ಲೈನ್ ಕಲಿಕೆಗೆ ಗಮನ ಇರಲಿ:
ಜನರೊಂದಿಗೆ ಬೆರೆತು ಕಲಿಕೆಯುವಿಕೆ ಈ ಕೊರೊನಾ ಸೋಂಕಿನ ಸಮಯದಲ್ಲಿ ಒಳಿತಲ್ಲ ಹಾಗಾಗಿ ಆನ್‌ಲೈನ್ ಕಲಿಕೆಯತ್ತ ಒತ್ತು ಕೊಡಿ. ಹಾಗೂ ಸ್ನೇಹಿತರೊಂದಿಗೆ ಈ ದಿನ ಯಾವುದೇ ರೀತಿಯ ಗುಂಪು ಓದು ಒಳಿತಲ್ಲ.

*ದಿನನಿತ್ಯ ಕೆಲಸಗಳಿಗೆ ಬಾಯ್ ಹೇಳಿ:
ಜನತಾ ಕರ್ಫ್ಯೂ ದಿನದಂದು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಳ್ಳಿ.ಹಾಗೆ ನಿಮ್ಮ ದಿನನಿತ್ಯದ ಕೆಲಸಗಳಿಗೆ ಒಂದು ದಿನದ ಮಟ್ಟಿಗೆ ಬಾಯ್ ಹೇಳಿ ನಿಮಗೆ ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವ ಬಗ್ಗೆ ಚಿಂತಿಸಿ.

ಭವಿಷ್ಯದ ಗುರಿಯ ಬಗ್ಗೆ ಆಲೋಚಿಸಿ:
ವಿದ್ಯಾರ್ಥಿ ಅಥವಾ ಉದ್ಯೋಗಿಗಳು ಜನತಾ ಕರ್ಫ್ಯೂ ದಿನದಂದು ಮನೆಯಲ್ಲೇ ಕುಳಿತು ನಿಮ್ಮ ಗುರಿಯ ಬಗ್ಗೆ ಆಲೋಚನೆ ಮಾಡಿ. ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಏನೆಲ್ಲಾ ಮಾಡಬೇಕು ಪ್ಲಾನ್ ಮಾಡಿ.

ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ:
ಕೊರೊನಾ ವೈರಸ್ ನಿಂದಾಗಿ ಹರಡುವ ಸೋಂಕಿನ ಬಗೆಗೆ ಈಗಿನ ಯುವಜನರು ಸಾಮಾಜಿಕ ತಾಣಗಳ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ. ಇಂದಿನ ಯುವಜನತೆಗೆ ನಾಳೆಯ ದೇಶದ ಭದ್ರಬುನಾದಿಗಳು ಹಾಗಾಗಿ ನೀವು ಸಾಮಾಜಿಕ ಕಳಕಳಿಯಲ್ಲಿ ಪಾಲ್ಗೋಳ್ಳಿ.

For Quick Alerts
ALLOW NOTIFICATIONS  
For Daily Alerts

English summary
Janta courfew: Students has to do these 5 tasks on 22nd march. read on
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X