ಆಕಾಶವಾಣಿ ಹಾಗೂ ಡಿ.ಎಸ್.ಇ.ಆರ್.ಟಿ ಮತ್ತು ಪ್ರೌಢಶಿಕ್ಷಣ ಮಂಡಳಿ ಸಹಯೋಗದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ದತೆಗೆ ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಲಾಗುತ್ತಿದೆ.
ಕಾರ್ಯಕ್ರಮದ ಸರಣಿಯು ಮಾರ್ಚ್ 2,2020 ರಿಂದ ಮಾರ್ಚ್ 24,2020 ರ ವರೆಗೆ ರಾಜ್ಯದ 13 ಆಕಾಶವಾಣಿ ಕೇಂದ್ರಗಳಿಂದ ಪ್ರಸಾರ ಮಾಡಲಾಗುವುದು.
ಕಾರ್ಯಕ್ರಮ ಪ್ರಸಾರವಾಗುವ ಸಮಯ: ಮಧ್ಯಾಹ್ನ 2:25 ರಿಂದ 3:00 ಗಂಟೆಯವರೆಗೆ
ಕಾರ್ಯಕ್ರಮದ ವೇಳಾಪಟ್ಟಿ ಕೆಳಗಿನಂತಿದೆ :
ರಾಜ್ಯದ ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ಮಾನಸಿಕ ತಜ್ಞರು, ವೈದ್ಯರು, ಸಚಿವರು ಹಾಗೂ ಇಲಾಖಾ ಅಧಿಕಾರಿಗಳು ಪರೀಕ್ಷೆಯ ವಿವಿಧ ಆಯಾಮದ ಕುರಿತು ಮಾಹಿತಿಯನ್ನು ನೀಡಲಿದ್ದಾರೆ. ಪರೀಕ್ಷೆ ಬರೆಯುವ ಕ್ರಮದ ಬಗ್ಗೆ ಪ್ರತಿ ವಿಷಯ ತಜ್ಞರು ಕೊನೆಯ ಹಂತದ ಸಿದ್ದತೆ ಹಾಗೂ ಬರೆಯುವ ಕ್ರಮದ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮಗಳೆಲ್ಲವೂ ಸಂಜೆ 5:30ಕ್ಕೆ ಬೆಂಗಳೂರಿನ ಎಫ್.ಎಂ. ರೇನ್ ಬೋ 101.3 ಇಲ್ಲಿ ಮರುಪ್ರಸಾರವಾಗಲಿದೆ. ಹಾಗೂ ಈ ಕಾರ್ಯಕ್ರಮವನ್ನು ಜಗತ್ತಿನೆಲ್ಲೆಡೆ ಪ್ರಸಾರಮಯದಲ್ಲಿ ಮಧ್ಯಾಹ್ನ 2:35 ಕ್ಕೆ https://www.airbengaluru.com/ ಲಿಂಕ್ ನಲ್ಲಿ ಹಾಗೂ ಸಂಜೆ 5:30ಕ್ಕೆ https://rainbow.bengaluru.com ನಲ್ಲಿ ಕೇಳಬಹುದು. ಇದಲ್ಲದೆ News On AIR APP ಮತ್ತು DTHನಲ್ಲಿಯೂ ಪ್ರಸಾರ ಸಮಯದಲ್ಲಿ ಕೇಳಬಹುದು.
ಆಕಾಶವಾಣಿಯಲ್ಲಿ ಪ್ರಸಾರವಾಗುವ ಪರೀಕ್ಷಾ ಸಿದ್ದತೆ ಕಾರ್ಯಕ್ರದ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ