ಸೆಪ್ಟೆಂಬರ್ 5 ಬಂತೆಂದ್ರೆ ಸಾಕು ಎಲ್ಲಾ ಮಕ್ಕಳಿಗೆ ಖುಷಿಯೋ ಖುಷಿ.ಯಾಕೆಂದ್ರೆ ಅಂದು ಟೀಚರ್ಸ್ ಡೇ. ಹೌದು ಸೆಪ್ಟಂಬರ್ 5 ರಂದು ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಮಕ್ಕಳ ಬಾಳಿನಲ್ಲಿ ಹೆತ್ತವರಿಗೆ ಮೊದಲ ಸ್ಥಾನವಿದ್ದರೆ ನಂತರದ ಸ್ಥಾನ ಅವರ ಟೀಚರ್ಸ್ ಗೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.
ಸೆಪ್ಟೆಂಬರ್ 5 ದೇಶಾದ್ಯಂತ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ. ಶಿಕ್ಷಕ ವೃತ್ತಿ ಆಯ್ಕೆ ಮಾಡಿಕೊಂಡು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆನಪಿನಲ್ಲಿ ಆಚರಿಸುವ ಈ ದಿನದಂದು ನಾವು ನಮ್ಮ ನೆಚ್ಚಿನ ಶಿಕ್ಷಕರುಗಳಿಗೆ ಗೌರವ ಸಲ್ಲಿಸುತ್ತೇವೆ.
ವಿದ್ಯಾರ್ಥಿಗಳ ಜೀವನಕ್ಕಾಗಿ ತಮ್ಮ ಜೀವನವನ್ನು ಮುಡಿಪಿಡುವ ಶಿಕ್ಷಕರು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಪಾತ್ರ ವಹಿಸುತ್ತಾರೆ.
ಹೀಗೆ ತಮ್ಮ ಜೀವನವನ್ನು ಶಿಕ್ಷಣಕ್ಕಾಗಿಯೇ ಅರ್ಪಿಸಿಕೊಂಡಿರುವ ಭಾರತದ ವಿಶಿಷ್ಟ ಶಿಕ್ಷಕರ ಪರಿಚಯಿಸುವುದೇ ಈ ಲೇಖನದ ಉದ್ದೇಶ.
ಬಾಬರ್ ಅಲಿ
ಶಿಕ್ಷಣ ಕಲಿಯುವಾಗಲೇ ಶಿಕ್ಷಕನಾದ ಬಾಬರ್ ಅಲಿ ಇಂದು ಎಲ್ಲರಿಗೂ ಮಾದರಿ. 25 ವರ್ಷದ ಬಾಬರ್ ಅಲಿ ಪಶ್ಚಿಮ ಬಂಗಾಳದ ಮೊಶಿರಾಬಾದ್ ನವರು. ಶಾಲಾ ದಿನಗಳನ್ನು ಕಷ್ಟಪಟ್ಟು ಅನುಭವಿಸಿದ ಬಾಬರ್ ಅಲಿ ಜಗತ್ತಿನ ಅತ್ಯಂತ ಕಿರಿಯ ಮುಖ್ಯೋಪಧ್ಯಾಯ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.
ಬಾಬರ್ ಅಲಿ ಶಾಲಾ ದಿನಗಳಲ್ಲಿಯೇ ತಾವೇ ಒಂದು ಶಾಲೆ ಶುರು ಮಾಡಿದವರು. ಬಾಬರ್ ಅಲಿ ಶಾಲೆಗೆ ಹೋಗುವಾಗ ಬೇರೆ ಮಕ್ಕಳು ಶಾಲೆಗೆ ಹೋಗದೆ ದನ, ಕುರಿ ಮೇಯಿಸುವುದು ಸೇರಿದಂತೆ ಹೊಲ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದನ್ನು ಗಮನಿಸಿ, ಇವರೂ ತನ್ನಂತೆ ಶಾಲೆಗೆ ಬರಬೇಕು ಎಂಬ ಹಂಬಲದಿಂದ ತಾವೇ ಒಂದು ಶಾಲೆಯನ್ನು ತೆಗೆದರು.
8ನೇ ತರಗತಿ ಓದುತ್ತಿದ್ದ ಬಾಬರ್ ತನ್ನ ಮನೆಯ ಸಮೀಪದಲ್ಲಿದ್ದ ಮರದಡಿಯಲ್ಲಿ ಶಾಲೆಯನ್ನು ಆರಂಭಿಸಿದಾಗ, ಆ ಶಾಲೆಗೆ ಮೊದಲ ವಿದ್ಯಾರ್ಥಿಯಾಗಿ ಸೇರಿದ್ದು ಬಾಬರ್ ಅಕ್ಕ. ಇಂದು ಅವರ ಶಾಲೆಯಲ್ಲಿ ಸಾವಿರಾರು ಮಕ್ಕಳು ಅಭ್ಯಾಸ ಮಾಡುತ್ತಿದ್ದು, ಬಾಬರ್ ಅಲಿಯ ಪಾಠವನ್ನು ಕರ್ನಾಟಕದ ಪಿಯುಸಿ ಪಠ್ಯದಲ್ಲಿ ಅಳವಡಿಸಲಾಗಿದೆ.
ಆದಿತ್ಯ ಕುಮಾರ್
ರಾಜೇಶ್ ಕುಮಾರ್ ಶರ್ಮ
ಅಬ್ದುಲ್ ಮಲ್ಲಿಕ್
ಇವರಿಷ್ಟೇ ಅಲ್ಲ ಇಂತಹ ಅನೇಕ ಮಹಾ ಶಿಕ್ಷಕರು ಈ ದೇಶದಲ್ಲಿ ಇದ್ದಾರೆ. ಇವರೆಲ್ಲರು ಭಾರತದ ಭವಿಷ್ಯ ಸೃಷ್ಟಿಸುವಲ್ಲಿ ನಿರತರಾಗಿದ್ದಾರೆ. ಶಿಕ್ಷಕ ವೃತ್ತಿಗೆ ವಿಶೇಷ ಗೌರವ ತೊಂದುಕೊಟ್ಟಿರುವ ಇವರುಗಳಿಗೇ ಒಂದು ಸಲಾಂ.