ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ 165ನೇ ಜನ್ಮ ವಾರ್ಷಿಕೋತ್ಸವ ದಿನವಾದ ಇಂದು ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
* ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕ್ ಅವರು ಕೇಸರಿ ಮತ್ತು ಮಹಾರಟ್ಟಾ ಎಂಬ ವಾರಪತ್ರಿಕೆಗಳನ್ನು ಪ್ರಾರಂಭಿಸಿದರು. ಕೇಸರಿ ಮರಾಠಿ ಭಾಷೆಯಲ್ಲಿದೆ ಮತ್ತು ಮಹಾರಟ್ಟಾ ಇಂಗ್ಲಿಷ್ ಭಾಷೆಯ ವಾರಪತ್ರಿಕೆಯಾಗಿದೆ.
* ಬ್ರಿಟಿಷರು ತಿಲಕ್ ಅವರನ್ನು 'ದಿ ಫಾದರ್ ಆಫ್ ದಿ ಇಂಡಿಯನ್ ಅನ್ರೆಸ್ಟ್' ಎಂದು ಕರೆಯುತ್ತಿದ್ದರು.
* ಭಾರತೀಯ ಸ್ವಾತಂತ್ರ್ಯ ಚಳವಳಿಯ ನೇತೃತ್ವ ವಹಿಸಿದ ಮೊದಲ ನಾಯಕ ಬಾಲ ಗಂಗಾಧರ್ ತಿಲಕ ಅವರನ್ನು 'ಸ್ವರಾಜ್ ಪಿತಾಮಹ' ಎಂದು ಕರೆಯಲಾಯಿತು.
* ಗಣೇಶ ಚತುರ್ಥಿ ಮತ್ತು ಶಿವಾಜಿ ಜಯಂತಿ ಎಂಬ ಎರಡು ಹಬ್ಬಗಳ ಆಚರಣೆ ಜಾರಿಯ ಹಿಂದೆ ತಿಲಕ್ ಅವರು ಇದ್ದಾರೆ.
* ಬಾಲಗಂಗಾಧರ್ ತಿಲಕ್ ಅವರು 1890 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು.
* ತಿಲಕ್ ಅವರ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅವರು ಜೈಲಿನಲ್ಲಿದ್ದರು. ಆ ಮಯದಲ್ಲಿ ತಿಲಕ್ 'ಗೀತಾ-ರಹಸ್ಯ' ಎಂಬ ಪುಸ್ತಕ ಬರೆದಿದ್ದಾರೆ.
* ತಿಲಕ್ ಇಂಡಿಯನ್ ಹೋಮ್ ರೂಲ್ ಲೀಗ್ ಅನ್ನು ಸ್ಥಾಪಿಸಿದರು ಮತ್ತು ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.