ಇನ್ಫೋಸಿಸ್ ಪ್ರತಿಷ್ಠಾನದ ಸಂಸ್ಥಾಪಕಿ, ಹೆಮ್ಮೆಯ ಕನ್ನಡತಿ, ಕೋಟ್ಯಂತರ ಮಹಿಳೆಯರ ಸ್ಪೂರ್ತಿ, ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜ ಸೇವಕರು, ಸಾಹಿತಿ ಹಾಗೂ ಮಹಾನ್ ಮಾನವತಾವಾದಿ ಮತ್ತು ಸರಳ ಸಜ್ಜನಿಕೆ ಮೂರ್ತಿಯಾಗಿರುವ ಸುಧಾಮೂರ್ತಿ ಅವರ ಹುಟ್ಟು ಹಬ್ಬದ ದಿನವಾದ ಇಂದು ಅವರ ಬಗ್ಗೆ ನಿಮಗೆ ತಿಳಿದಿರದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡಿದ್ದೇವೆ ಓದಿ ತಿಳಿಯಿರಿ.
* ಸುಧಾ ಮೂರ್ತಿ ಅವರು ಆಗಸ್ಟ್ 19,1950 ರಂದು ಕರ್ನಾಟಕದ ಶಿಗ್ಗಾಂವ್ ನಲ್ಲಿರುವ ಮಧ್ವ ಕುಟುಂಬದಲ್ಲಿ ಶಸ್ತ್ರಚಿಕಿತ್ಸಕ ಡಾ.ಆರ್. ಎಚ್. ಕುಟ್ಟಿ ಮತ್ತು ಅವರ ಪತ್ನಿ ವಿಮಲಾ ಕುಲಕರ್ಣಿ ಅವರಿಗೆ ಜನಿಸಿದರು.
* ಅವರು ಭಾರತೀಯ ಎಂಜಿನಿಯರ್, ಪ್ರತಿಭಾವಂತ ಶಿಕ್ಷಕಿ, ಲೋಕೋಪಕಾರಿ ಮತ್ತು ಕನ್ನಡ ಮತ್ತು ಇಂಗ್ಲಿಷ್ನ ಲೇಖಕಿಯೂ ಆಗಿದ್ದಾರೆ.
* ಹುಬ್ಬಳ್ಳಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬಿ.ಇ ಅಧ್ಯಯನ ಮಾಡಿದ್ದಾರೆ.
* ಸುಧಾ ಮೂರ್ತಿಯವರು ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ಎಂ.ಇ ಪೂರ್ಣಗೊಳಿಸಿದರು.
* ಅವರ ವೃತ್ತಿ ಜೀವನವನ್ನು ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಆಗಿ ಆರಂಭಿಸಿದರು.
* ಅವರು ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿ TATA ಎಂಜಿನಿಯರಿಂಗ್ ಮತ್ತು ಲೋಕೋಮೋಟಿವ್ ಕಂಪನಿ (TELCO) ಯಲ್ಲಿ ನೇಮಕಗೊಂಡ ಮೊದಲ ಮಹಿಳಾ ಎಂಜಿನಿಯರ್. ಮೂರ್ತಿಯವರು ಪುಣೆಯಲ್ಲಿ ಡೆವಲಪ್ಮೆಂಟ್ ಇಂಜಿನಿಯರ್ ಆಗಿ ಕಂಪನಿಗೆ ಸೇರಿದರು ನಂತರ ಮುಂಬೈ ಮತ್ತು ಜಮ್ಶೆಡ್ಪುರಕ್ಕೆ ತೆರಳಿದರು.
* ಸುಧಾಮೂರ್ತಿ ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕಂಪ್ಯೂಟರ್ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಪರಿಚಯಿಸುವ ದಿಟ್ಟ ಕ್ರಮವನ್ನು ಪ್ರಾರಂಭಿಸಿದರು ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಕಲಿಸಿದರು. ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಇದೇ ರೀತಿಯ ಸೌಲಭ್ಯಗಳನ್ನು ಒದಗಿಸುವ ಚಳುವಳಿಯನ್ನು ಅವರು ಬೆಂಬಲಿಸಿದರು.
* 1995ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ನಿಂದ 'ಅತ್ಯುತ್ತಮ ಶಿಕ್ಷಕ ಪ್ರಶಸ್ತಿ' ಪಡೆದರು.
* 1996ರಲ್ಲಿ ಅವರು ಇನ್ಫೋಸಿಸ್ ಫೌಂಡೇಶನ್ ಅನ್ನು ಪ್ರಾರಂಭಿಸಿದರು. ಈಗಲೂ ಅವರು ಇನ್ಫೋಸಿಸ್ ಫೌಂಡೇಶನ್ನ ಟ್ರಸ್ಟಿಯಾಗಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪಿಜಿ ಕೇಂದ್ರದಲ್ಲಿ ವಿಸಿಟಿಂಗ್ ಪ್ರಾಧ್ಯಾಪಕರಾಗಿದ್ದಾರೆ.
* ಸುಧಾಮೂರ್ತಿ ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷರಾಗಿದ್ದಾರೆ ಮತ್ತು ಗೇಟ್ಸ್ ಫೌಂಡೇಶನ್ನ ಸಾರ್ವಜನಿಕ ಆರೋಗ್ಯ ರಕ್ಷಣೆ ಉಪಕ್ರಮಗಳ ಸದಸ್ಯರಾಗಿದ್ದಾರೆ.
* ಇನ್ಫೋಸಿಸ್ ಫೌಂಡೇಶನ್ ಎರಡು ಸಂಸ್ಥೆಗಳನ್ನು ನೀಡಿದೆ ಮತ್ತು ಉದ್ಘಾಟನೆ ಮಾಡಿದೆ: ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ (ಸಿಎಸ್ಇ) ವಿಭಾಗ ಮತ್ತು ಎನ್ಎಲ್ಎಸ್ಐಯು ಬೆಂಗಳೂರಿನಲ್ಲಿ ನಾರಾಯಣರಾವ್ ಮೇಲ್ಗಿರಿ ಸ್ಮಾರಕ ರಾಷ್ಟ್ರೀಯ ಕಾನೂನು ಗ್ರಂಥಾಲಯ.
* ಅವರ ಮೊದಲ ಗಮನಾರ್ಹ ಕೆಲಸಗಳೆಂದರೆ 'ನನ್ನ ಅಜ್ಜಿಗೆ ಹೇಗೆ ಓದುವುದನ್ನು ಕಲಿಸಿದೆ' ಮತ್ತು ಇತರ ಅನೇಕ ಸಣ್ಣ ಕಥೆಗಳು.
* ಸುಧಾ ಮೂರ್ತಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅದರಲ್ಲಿ ಎರಡು ಪ್ರವಾಸ ಕಥನಗಳು, ಎರಡು ತಾಂತ್ರಿಕ ಪುಸ್ತಕಗಳು, ಆರು ಕಾದಂಬರಿಗಳು ಮತ್ತು ಮೂರು ಶೈಕ್ಷಣಿಕ ಪುಸ್ತಕಗಳು.
* ಅವರು ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದರು ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ 'ದಿ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ' ಸ್ಥಾಪಿಸಿದ್ದಾರೆ.
* ಸುಧಾ ಮೂರ್ತಿ ಮರಾಠಿ ಚಿತ್ರ 'ಪಿತೃರೂನ್' ಮತ್ತು ಕನ್ನಡದ 'ಪ್ರಾರ್ಥನಾ' ಚಿತ್ರಗಳಲ್ಲಿ ನಟಿಸಿದ್ದಾರೆ.
* 2018ರಲ್ಲಿ ಸುಧಾ ಮೂರ್ತಿ ಕ್ರಾಸ್ವರ್ಡ್-ರೇಮಂಡ್ ಪುಸ್ತಕ ಪ್ರಶಸ್ತಿಗಳಲ್ಲಿ ಲೈಫ್ ಟೈಮ್ ಅಚೀವ್ಮೆಂಟ್ ಪ್ರಶಸ್ತಿಯನ್ನು ಪಡೆದರು.
* ಫಿಲ್ಮ್ಫೇರ್ ನಿಯತಕಾಲಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮ್ಮ ಮನೆಯಲ್ಲಿ 500 ಕ್ಕೂ ಹೆಚ್ಚು ಡಿವಿಡಿಗಳನ್ನು ಹೊಂದಿರುವುದನ್ನು ಬಹಿರಂಗಪಡಿಸಿದರು. ಅವರು ಚಲನಚಿತ್ರಗಳನ್ನು ಹೆಚ್ಚು ನೋಡಲು ಇಷ್ಟಪಡುತ್ತಾರೆ ಮತ್ತು ಚಲನಚಿತ್ರ ಪ್ರೇಮಿಯಾಗಿದ್ದಾರೆ.