ಹತ್ತನೇ ಸಿಖ್ ಗುರು, ಗುರು ಗೋಬಿಂದ್ ಸಿಂಗ್ ಜಿ ಅವರು 1666 ರಲ್ಲಿ ಪೋಹ್ (ಪೌಶ್) ತಿಂಗಳಲ್ಲಿ ಸಪ್ತಮಿ ತಿಥಿ, ಶುಕ್ಲ ಪಕ್ಷದಲ್ಲಿ ಜನಿಸಿದರು. ಈ ದಿನ ಸಿಖ್ಖರ ಪಾಲಿಗೆ ಅತೀ ಪವಿತ್ರ ದಿನವಾಗಿದೆ. ಜಗತ್ತಿನಾದ್ಯಂತ ಬಹಳ ಶ್ರದ್ಧೆಯಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ದಿನಾಂಕವು ಪ್ರತಿವರ್ಷ ಬದಲಾಗುತ್ತದೆ. ಈ ವರ್ಷ ಗುರು ಗೋಬಿಂದ್ ಸಿಂಗ್ ಜಯಂತಿಯನ್ನು ಜನವರಿ 9 ರಂದು ಆಚರಿಸಲಾಗುತ್ತಿದೆ.
ಸಿಖ್ಖರು ಈ ವರ್ಷ ತಮ್ಮ ಹತ್ತನೇ ಗುರುವಿನ 355 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ. ಗುರು ಗೋಬಿಂದ್ ಸಿಂಗ್ ಜಿ ಅವರು ಗುರು ತೇಜ್ ಬಹದ್ದೂರ್ (ಒಂಬತ್ತನೇ ಸಿಖ್ ಗುರು) ಮತ್ತು ಮಾತಾ ಗುಜ್ರಿ ಅವರ ಏಕೈಕ ಪುತ್ರ. ಇವರು ಪಾಟ್ನಾದಲ್ಲಿ ಜನಿಸಿದರು. ಮೊಘಲ್ ದೊರೆ ಔರಂಗಜೇಬನ ಆದೇಶದ ಮೇರೆಗೆ ಅವನ ತಂದೆ ಗುರು ತೇಜ್ ಬಹದ್ದೂರ್ ರ ಶಿರಚ್ಛೇದ ಮಾಡಿದ ಮಾಡಿದ ನಂತರ ಗುರು ಗೋಬಿಂದ್ ರನ್ನು ಒಂಬತ್ತನೆಯ ವಯಸ್ಸಿನಲ್ಲಿ ಹತ್ತನೇ ಸಿಖ್ ಗುರು ಎಂದು ಪಟ್ಟಾಭಿಷೇಕವಾಯಿತು.
ಗುರು ಗೋಬಿಂದ್ ಸಿಂಗ್ ಅವರ ಜನ್ಮದಿನದಂದು ವಿದ್ಯಾರ್ಥಿಗಳಿಗಾಗಿ ಅವರ ಪ್ರಸಿದ್ಧ ಉಲ್ಲೇಖಗಳನ್ನು ಇಲ್ಲಿ ನೀಡುತ್ತಿದ್ದೇವೆ ಓದಿ ತಿಳಿಯಿರಿ.
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಒಳಗಿನಿಂದ ಸ್ವಾರ್ಥವನ್ನು ನಿರ್ಮೂಲನೆ ಮಾಡಿದಾಗ ಶ್ರೇಷ್ಠ ಸೌಕರ್ಯಗಳು ಮತ್ತು ಶಾಶ್ವತ ಶಾಂತಿ ಸಿಗುತ್ತದೆ." - ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ನಿಜವಾದ ಗುರುವಿನ ಸೇವೆ ಮಾಡುವುದರಿಂದ ಶಾಶ್ವತ ಶಾಂತಿ ಸಿಗುತ್ತದೆ ಮತ್ತು ಹುಟ್ಟು ಸಾವು ನೋವುಗಳು ದೂರವಾಗುತ್ತವೆ." -ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಅಜ್ಞಾನಿಯು ಸಂಪೂರ್ಣವಾಗಿ ಕುರುಡನಾಗಿರುತ್ತಾನೆ, ಅವನು ಆಭರಣದ ಮೌಲ್ಯವನ್ನು ಮೆಚ್ಚುವುದಿಲ್ಲ." - ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಭಗವಂತನ ನಾಮವನ್ನು ಧ್ಯಾನಿಸುವವರು ಸಕಲ ಶಾಂತಿ ಮತ್ತು ಸೌಕರ್ಯಗಳನ್ನು ಪಡೆಯುತ್ತಾರೆ." - ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಭಗವಂತನ ಉಪದೇಶವನ್ನು ಹೇಳುವ ಗುರುಗಳಿಗೆ ನಾನು ಬಲಿಯಾಗಿದ್ದೇನೆ." - ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಭಗವಂತನ ಸೇವೆಗೆ ಕಾರಣರಾದ ಆ ಗುರುವಿಗೆ ನಾನು ಎಂದೆಂದಿಗೂ ಋಣಿ." - ಗುರು ಗೋಬಿಂದ್ ಸಿಂಗ್
ವಿದ್ಯಾರ್ಥಿಗಳಿಗೆ ಗುರು ಗೋಬಿಂದ್ ಸಿಂಗ್ ಅವರ ಪ್ರಸಿದ್ಧ ಉಲ್ಲೇಖಗಳು
"ಗುರುವಿನ ವಾಕ್ಯದ ಮೂಲಕ ಭಗವಂತನನ್ನು ಪೂಜಿಸುವ ಮತ್ತು ಆರಾಧಿಸುವವರು ತಮ್ಮ ನೋವು ಮತ್ತು ಸಂಕಟಗಳನ್ನು ಮರೆತುಬಿಡುತ್ತಾರೆ." - ಗುರು ಗೋಬಿಂದ್ ಸಿಂಗ್