ಕರ್ನಾಟಕ ರಾಜ್ಯ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯೆಂದರೆ 'ಕರ್ನಾಟಕ ರತ್ನ' ಪ್ರಶಸ್ತಿ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲು 1992ರಲ್ಲಿ ಪ್ರಾರಂಭಿಸಲಾಯಿತು. ಈ ಪ್ರಶಸ್ತಿಯು 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ. ಅಂದಿನಿಂದ ಇಂದಿನವರೆಗೂ ಶ್ರೇಷ್ಟ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಹೆಸರು, ಜನ್ಮ ಮತ್ತು ಮರಣ ವರ್ಷ, ಪ್ರಶಸ್ತಿ ಲಭಿಸಿದ ವರ್ಷ ಹಾಗೂ ಪ್ರಶಸ್ತಿ ಪಡೆದುಕೊಂಡ ಕ್ಷೇತ್ರದ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ :
ಸಂಖ್ಯೆ | ಹೆಸರು | ಪ್ರಶಸ್ತಿ ವರ್ಷ | ಕ್ಷೇತ್ರ |
1. | ಕುವೆಂಪು (ಕೆ. ವಿ. ಪುಟ್ಟಪ್ಪ) | 1992 | ಸಾಹಿತ್ಯ |
2. | ಡಾ|| ರಾಜ್ ಕುಮಾರ್ | 1992 | ಚಲನಚಿತ್ರ ರಂಗ, ಸಂಗೀತ |
3. | ಎಸ್. ನಿಜಲಿಂಗಪ್ಪ | 1999 | ರಾಜಕೀಯ |
4. | ಸಿ. ಎನ್. ಆರ್. ರಾವ್ | 2000 | ವಿಜ್ಞಾನ |
5. | ದೇವಿ ಪ್ರಸಾದ್ ಶೆಟ್ಟಿ | 2001 | ವೈದ್ಯಕೀಯ |
6. | ಭೀಮಸೇನ ಜೋಷಿ | 2005 | ಸಂಗೀತ |
7. | ಶ್ರೀ ಶಿವಕುಮಾರ ಸ್ವಾಮಿಗಳು | 2007 | ಸಾಮಾಜಿಕ ಸೇವೆ |
8. | ದೇ. ಜವರೇಗೌಡ | 2008 | ಶಿಕ್ಷಣ, ಸಾಹಿತ್ಯ |
9. | ಡಿ. ವೀರೇಂದ್ರ ಹೆಗ್ಗಡೆ | 2009 | ಸಾಮಾಜಿಕ ಸೇವೆ |
10. | ಪುನೀತ್ ರಾಜ್ಕುಮಾರ್ | 2021 | ಸಿನೆಮಾ |
For Quick Alerts
For Daily Alerts
English summary
Karnataka ratna award recipients list here. please check it.