ಬಾಪು ಎಂದು ಪ್ರೀತಿಯಿಂದ ಕರೆಯಲಾಗುವ ಮಹಾತ್ಮ ಗಾಂಧಿಯವರು ಭಾರತದ ಸ್ವತಂತ್ರ ಚಳುವಳಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. 'ರಾಷ್ಟ್ರಪಿತ' ಎಂದು ಸಂಬೋಧಿಸಲ್ಪಟ್ಟ ಗಾಂಧೀಜಿಯವರು ಅಹಿಂಸೆಯ (ಅಹಿಂಸಾ) ತತ್ವಗಳ ಶ್ರೇಷ್ಠ ಪ್ರತಿಪಾದಕರು. ಅವರ ತತ್ವಶಾಸ್ತ್ರವು ತಲೆಮಾರುಗಳಿಂದಲೂ ಯುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ.
1948ರ ಜನವರಿ 30ರಂದು ಬಾಪೂಜಿ ಅವರನ್ನು ನಾಥೂರಾಂ ಗೋಡ್ಸೆ ಗುಂಡಿಕ್ಕಿ ಕೊಂದರು. ಪ್ರತಿ ವರ್ಷ ಜನವರಿ 30ರಂದು ಅಂದರೆ ಇಂದು ಗಾಂಧೀಜಿಯವರು ನಮ್ಮನಗಲಿದ ದಿನ ಇದರ ಸ್ಮರಣೆಗಾಗಿ "ಹುತಾತ್ಮರ ದಿನ" ಎಂದು ಆಚರಿಸಲಾಗುತ್ತದೆ. ಮಹಾನ್ ಬಾಪು ಅವರ ಹುತಾತ್ಮರ ದಿನದಂದು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಎಲ್ಲಾ ವೀರ ಮಹಿಳೆಯರು ಹಾಗೂ ಪುರುಷರನ್ನು ಕೂಡ ನಾವು ನೆನಪಿಸಿಕೊಳ್ಳುತ್ತೇವೆ. ಈ ದಿನದಂದು ಭಾರತದ ಪ್ರಧಾನ ಮಂತ್ರಿ ಮತ್ತು ವಿವಿಧ ಸೇನಾ ದಳಗಳ ಮುಖ್ಯಸ್ಥರು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಹುತಾತ್ಮರಿಗೆ ಗೌರವವನ್ನು ಸಲ್ಲಿಸುತ್ತಾರೆ ಜೊತೆಗೆ ಎರಡು ನಿಮಿಷಗಳ ಮೌನಾಚರಣೆಯನ್ನು ಮಾಡಿ ಪ್ರಾರ್ಥಿಸುತ್ತಾರೆ. ಈ ದಿನ ಹುತಾತ್ಮರ ನೆನಪಿನಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳಿಗೆ ಮಹಾತ್ಮ ಗಾಂಧಿಯವರ ಕೆಲವು ಸ್ಪೂರ್ತಿದಾಯಕ ಉಲ್ಲೇಖಗಳನ್ನು ನೀಡಲಾಗಿದೆ ಓದಿ ತಿಳಿಯಿರಿ.
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ನನ್ನ ಅನುಮತಿಯಿಲ್ಲದೇ ಯಾರೂ ನನ್ನನ್ನು ನೋಯಿಸಲಾರರು''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ನೀವು ಏನು ಯೋಚಿಸುತ್ತಿರಿ, ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ಸಂತೋಷ ನಿರ್ಧರಿತವಾಗುತ್ತದೆ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ದುರ್ಬಲರಿಗೆ ಬೇರೆಯವರನ್ನು ಕ್ಷಮಿಸುವ ಸಾಮರ್ಥ್ಯವಿರಲ್ಲ, ಕ್ಷಮೆ ಎಂಬುದು ಪ್ರಬಲರ ಲಕ್ಷಣವಾಗಿದೆ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಸಾವಿರ ಮಾತುಗಳಿಗಿಂತ ಒಂದು ಎಳ್ಳಷ್ಟು ಕೆಲಸಕ್ಕೆ ಬೆಲೆ ಜಾಸ್ತಿಯಿದೆ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಜಗತ್ತು ಬದಲಾಗಬೇಕು ಎನ್ನುವವರು ಮೊದಲು ತಮ್ಮಿಂದಲೇ ಬದಲಾವಣೆಯಾಗಬೇಕು ಎಂಬುದನ್ನು ಅರಿತುಕೊಳ್ಳಬೇಕು''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
"ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಬಲಿಷ್ಠತೆ ಎನ್ನುವುದು ನಿಮ್ಮ ದೈಹಿಕ ಸಾಮರ್ಥ್ಯದಿಂದ ಬರುವಂಥದಲ್ಲ; ಅದು ಅದಮ್ಯ ಅಂತಃಶಕ್ತಿಯಿಂದ ಬರುವಂಥದ್ದು''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಸ್ವಾಭಿಮಾನದ ನಷ್ಟಕ್ಕಿಂತ ದೊಡ್ಡ ನಷ್ಟ ಮತ್ತೊಂದಿಲ್ಲ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಪ್ರೀತಿ ಜಗತ್ತಿನ ಪ್ರಬಲವಾದ ಶಕ್ತಿ''- ಮಹಾತ್ಮಗಾಂಧಿ
ಮಹಾತ್ಮ ಗಾಂಧಿಯವರ ಸ್ಫೂರ್ತಿದಾಯಕ ಉಲ್ಲೇಖಗಳು :
''ಇವತ್ತು ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ನಿಮ್ಮ ನಾಳೆ ನಿಂತಿದೆ''- ಮಹಾತ್ಮಗಾಂಧಿ