Martyr's Day 2022 History : ಶಹೀದ್ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆ ಕುರಿತ ಮಾಹಿತಿ

ಭಾರತದಲ್ಲಿ ಹುತಾತ್ಮರ ದಿನ 2022: ಶಹೀದ್ ದಿವಸ್ ಅಥವಾ ಹುತಾತ್ಮರ ದಿನವನ್ನು ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ 23 ರಂದು ದೇಶಕ್ಕಾಗಿ ತ್ಯಾಗ ಮಾಡಿದ ವೀರ ಸೈನಿಕರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಶಹೀದ್ ದಿನದಂದು ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್ ಥಾಪರ್, ಭಗತ್ ಸಿಂಗ್ ಮತ್ತು ಶಿವರಾಮ ರಾಜಗುರು ಅವರ ಪುಣ್ಯತಿಥಿಗಳನ್ನು ಆಚರಿಸಲಾಗುತ್ತದೆ. ಈ ದಿನ ಅವರ ತ್ಯಾಗ ಮತ್ತು ಹೋರಾಟವನ್ನು ನೆನೆದು ಗೌರವಿಸುವ ಅವಕಾಶವನ್ನು ಒದಗಿಸುತ್ತದೆ.

ಶಹೀದ್ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆ ಕುರಿತ ಮಾಹಿತಿ

ಶಹೀದ್ ದಿನದಂದು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, ನೆಹರು ಯುವ ಕೇಂದ್ರ ಸಂಘಟನೆಯು ಹೆಚ್ಚಿನ ಸಂಖ್ಯೆಯ ಯುವ ಸ್ವಯಂಸೇವಕರನ್ನು ಒಳಗೊಂಡು ಎಲ್ಲಾ 623 ಜಿಲ್ಲೆಗಳಲ್ಲಿ ಶಹೀದ್ ದಿವಸ್ ಅನ್ನು ಆಯೋಜಿಸುತ್ತದೆ. ಹುತಾತ್ಮರ ದಿನ 2022ರ ಭಾಗವಾಗಲು ಹೆಚ್ಚಿನ ಜನರನ್ನು ಉತ್ತೇಜಿಸಲು ಕೋಲ್ಕತ್ತಾದ ವಿಕ್ಟೋರಿಯಾ ಗ್ಯಾಲರಿ ಹಾಲ್‌ನಲ್ಲಿ ಬಿಪ್ಲೋಬಿ ಭಾರತ್ ಗ್ಯಾಲರಿಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಸಜ್ಜಾಗಿದ್ದಾರೆ. ಬನ್ನಿ ಈ ದಿನದ ಇತಿಹಾಸ, ಮಹತ್ವ ಮತ್ತು ಆಚರಣೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಶಹೀದ್ ದಿವಸ್ 2022 ದಿನಾಂಕ :

ಮಾರ್ಚ್ 23 ರಂದು ಮೂರು ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್ ಥಾಪರ್, ಭಗತ್ ಸಿಂಗ್ ಮತ್ತು ಶಿವರಾಮ್ ರಾಜಗುರುಗಳ ತ್ಯಾಗವನ್ನು ನೆನಪಿಟ್ಟುಕೊಳ್ಳಲು ಭಾರತದಲ್ಲಿ ಪ್ರತಿ ವರ್ಷ ಶಹೀದ್ ದಿವಸ್ ಅನ್ನು ಆಚರಿಸಲಾಗುತ್ತದೆ.
ಅದಾಗ್ಯೂ ಭಾರತವು ಮಹಾತ್ಮ ಗಾಂಧಿಯವರ ಸ್ಮರಣಾರ್ಥ ಪ್ರತಿ ವರ್ಷ ಜನವರಿ 30 ರಂದು ಶಹೀದ್ ದಿವಸ್ ಅನ್ನು ಆಚರಿಸುತ್ತದೆ.

ಶಹೀದ್ ದಿವಸ್ 2022 ಇತಿಹಾಸ :

ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರು ತೋರಿದ ಶೌರ್ಯ ಮತ್ತು ಶಕ್ತಿಯನ್ನು ಅಂಗೀಕರಿಸಲು ಶಹೀದ್ ದಿವಸ್ 2022 ಅನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.

ಈ ದಿನ ವಿಶೇಷವಾಗಿ ಸ್ಮರಿಸಲ್ಪಡುವ ಮೂವರು ಸ್ವಾತಂತ್ರ್ಯ ಹೋರಾಟಗಾರರೆಂದರೆ- ಸುಖದೇವ್ ಥಾಪರ್, ಭಗತ್ ಸಿಂಗ್ ಮತ್ತು ಶಿವರಾಮ ರಾಜಗುರು. 1929 ರಲ್ಲಿ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಮೇಲೆ ಬಾಂಬ್ ದಾಳಿ ಮಾಡಿದ ನಂತರ ಮೂವರು ಧೈರ್ಯಶಾಲಿಗಳನ್ನು ಜೈಲಿಗೆ ಕಳುಹಿಸಲಾಯಿತು. ಮೂವರಿಗೂ ಮರಣದಂಡನೆ ವಿಧಿಸಲಾಯಿತು, ಈ ಹಿನ್ನೆಲೆ ಮಾರ್ಚ್ 23, 1931 ರಂದು ಮೂವರನ್ನು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅವರನ್ನು ಗಲ್ಲಿಗೇರಿಸಿದಾಗ ಸುಖದೇವ್, ಸಿಂಗ್ ಅವರಿಗೆ 23 ವರ್ಷ ಮತ್ತು ರಾಜಗುರು ಅವರು ಕೇವಲ 22 ವರ್ಷದವರಾಗಿದ್ದರು.

ಶಹೀದ್ ದಿವಸ್ 2022ರ ಮಹತ್ವ :

ಶಹೀದ್ ದಿವಸ್ ಅನ್ನು ಪ್ರತಿ ವರ್ಷ ಭಾರತದ ನಾಗರಿಕರು ಮಾರ್ಚ್ 23 ರಂದು ಆಚರಿಸುತ್ತಾರೆ. ಭಾರತದಲ್ಲಿ ಹುತಾತ್ಮರ ದಿನವು ಭಾರತದ ಸ್ವಾತಂತ್ರ್ಯದ ಚಳುವಳಿಯನ್ನು ಬೆಂಬಲಿಸಲು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯ ದಿನವಾಗಿದೆ.

ಶಹೀದ್ ದಿವಸ್ ಅನ್ನು ಆಚರಿಸಲು ಯಾವುದೇ ಅಧಿಕೃತ ರಜಾದಿನವನ್ನು ಘೋಷಿಸದಿದ್ದರೂ, ದೇಶದಾದ್ಯಂತ ಅನೇಕ ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಕಚೇರಿಗಳು ಮತ್ತು ಇತರ ಸಂಸ್ಥೆಗಳು ಶಹೀದ್ ದಿವಸ್ ಅನ್ನು ಆಚರಿಸುತ್ತವೆ. ಅನೇಕ ಶಾಲೆಗಳಲ್ಲಿ ಹುತಾತ್ಮರ ದಿನವನ್ನು ಚರ್ಚೆ ಮತ್ತು ಪ್ರಬಂಧ ಬರವಣಿಗೆ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಆಚರಿಸಲಾಗುತ್ತದೆ, ಅಲ್ಲಿನ ಥೀಮ್ ದೇಶಭಕ್ತಿಯಾಗಿರುತ್ತದೆ.

ಶಹೀದ್ ದಿವಸ್ 2022 : ಭಾರತದಲ್ಲಿ ಮಾರ್ಚ್ 23 ರಂದು ಹುತಾತ್ಮರ ದಿನವನ್ನು ಏಕೆ ಆಚರಿಸಲಾಗುತ್ತದೆ?

ಶಹೀದ್ ದಿವಸ್ ಅನ್ನು ಭಾರತದಲ್ಲಿ ಮಾರ್ಚ್ 23 ರಂದು ಆಚರಿಸಲಾಗುತ್ತದೆ ಏಕೆಂದರೆ 1931 ರಲ್ಲಿ ಈ ದಿನದಂದು ಮೂವರು ಯುವ ಸ್ವಾತಂತ್ರ್ಯ ಹೋರಾಟಗಾರರಾದ ಸುಖದೇವ್ ಥಾಪರ್, ಭಗತ್ ಸಿಂಗ್ ಮತ್ತು ಶಿವರಾಮ್ ರಾಜಗುರುಗಳನ್ನು ಬ್ರಿಟಿಷರು ಲಾಹೋರ್ ಜೈಲಿನಲ್ಲಿ ಗಲ್ಲಿಗೇರಿಸಿದರು. ಅವರು ತಮ್ಮ ಶೌರ್ಯ, ಧೈರ್ಯ ಮತ್ತು ಭಾರತವನ್ನು ಸ್ವತಂತ್ರ ದೇಶವಾಗಿ ನೋಡುವ ಸಂಕಲ್ಪಕ್ಕಾಗಿ ಎಂದೆಂದಿಗೂ ಹೆಸರುವಾಸಿಯಾಗಿರುತ್ತಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Martyr's day is celebrated on march 23. Here is the date, history and significance of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+