ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂದೇ ಪ್ರಸಿದ್ಧರಾಗಿರುವ ಮತ್ತು ಭಾರತದಲ್ಲಿ ಅಕ್ಷರ ಕ್ರಾಂತಿ ಆರಂಭಿಸಿದ ಮೊದಲ ಮಹಿಳೆ ಸಾವಿತ್ರಿಬಾಯಿ ಫುಲೆ. ಇಂದು ಅವರ 191 ಜನ್ಮವಾರ್ಷಿಕೋತ್ಸವ ದಿನ. ಈ ದಿನದಂದು ಭಾರತದಲ್ಲಿ ಅಕ್ಷರ ಕ್ರಾಂತ್ರಿ ಮೊದಲ ಮಹಿಳಾ ಶಿಕ್ಷಕಿಯ ಕುರಿತಾದ ಒಂದಷ್ಟು ಆಸಕ್ತಿದಾಯಕ ಸಂಗತಿಗಳನ್ನು ಇಲಿ ನೀಡಲಾಗಿದೆ ತಪ್ಪದೇ ಓದಿ ತಿಳಿಯಿರಿ.
ಸಾವಿತ್ರಿಬಾಯಿ ಫುಲೆ 1831ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಜ್ಯೋತಿಬಾ ಫುಲೆ ಅವರನ್ನು ವಿವಾಹವಾದರು. ಮದುವೆಯಾದಾಗ ಅವರಿಗೆ 8 ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ 13 ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. 1847ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ 17 ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು. ಅವರು ಮಹಿಳಾ ಪರಿಸ್ಥಿತಿಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ದೇಶದಲ್ಲಿ ಮಹಿಳಾ ಶಿಕ್ಷಣದ ಪ್ರವರ್ತಕರಾದರು.
1. ಸಾವಿತ್ರಿಬಾಯಿ ಫುಲೆ ಅವರನ್ನು ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗುತ್ತದೆ.
2. ಒಂಬತ್ತನೇ ವಯಸ್ಸಿನಲ್ಲಿ ವಿವಾಹವಾದ ಅವರು ಬಾಲ್ಯ ವಿವಾಹ ಮತ್ತು ಸತಿ ಪ್ರಾತದಂತಹ ಸಾಮಾಜಿಕ ಅನಿಷ್ಟಗಳ ವಿರುದ್ಧ ಹೋರಾಡಿದರು.
3. ಅವರು ಮಹಿಳೆಯರಿಗೆ ಶಿಕ್ಷಣ ನೀಡಲು ಒತ್ತು ನೀಡಿದರು ಮತ್ತು ಅವರ ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಅವರು ಭಾರತದಲ್ಲಿ ಹುಡುಗಿಯರಿಗೆ ಮೊದಲ ಶಾಲೆಯನ್ನು ತೆರೆದರು. ಅವರು ಹುಡುಗಿಯರಿಗಾಗಿ ಒಟ್ಟು 18 ಶಾಲೆಗಳನ್ನು ತೆರೆದರು.
4. ಅವರು ಕೇವಲ ಮಹಿಳಾ ಹಕ್ಕುಗಳಿಗಾಗಿ ಕೆಲಸ ಮಾಡಲಿಲ್ಲ, ಜಾತಿ ವ್ಯವಸ್ಥೆಯ ಅಭ್ಯಾಸದ ವಿರುದ್ಧ ಕೂಡ ಹೋರಾಡಿದರು.
5. ಅವರು ತನ್ನ ಸ್ವಂತ ಮನೆಯಲ್ಲಿ ಅಸ್ಪೃಶ್ಯರಿಗಾಗಿ ಬಾವಿಯನ್ನು ತೆರೆಯುದರು. ಇದು ಅಸ್ಪೃಶ್ಯತೆ ಮತ್ತು ಬಹಿಷ್ಕಾರದ ಬಗ್ಗೆ ಅವರಿಗಿದ್ದ ಸಹಾನುಭೂತಿಯಿಂದ ಉಂಟಾದ ಒಂದು ಕ್ರಿಯೆಯಾಗಿದೆ.
6. ಸಾವಿತ್ರಿಬಾಯಿ ಫುಲೆ ಕೇವಲ ಸಮಾಜ ಸುಧಾರಕಿಯಾಗದೆ ತತ್ವಜ್ಞಾನಿ ಮತ್ತು ಕವಿಯೂ ಆಗಿದ್ದರು. ಅವರ ಕವನಗಳು ಹೆಚ್ಚಾಗಿ ಪ್ರಕೃತಿ, ಶಿಕ್ಷಣ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಯ ಸುತ್ತ ಸುತ್ತುತ್ತವೆ.
7. ಗರ್ಭಿಣಿಯ ಅತ್ಯಾಚಾರ ಸಂತ್ರಸ್ತರ ಶೋಚನೀಯ ಪರಿಸ್ಥಿತಿಗಳನ್ನು ಅವರು ಗಮನಿಸಿದರು. ಅವರ ಪತಿಯೊಂದಿಗೆ "ಬಾಲ್ಹತ್ಯ ಪ್ರತಿಬಂಧಕ್ ಗೃಹ" ಎಂಬ ಆರೈಕೆ ಕೇಂದ್ರವನ್ನು ತೆರೆದರು.
8. ವಿಧವೆಯರ ಸಂಕಟಗಳನ್ನು ಕಡಿಮೆ ಮಾಡಲು ಆ ದಿನಗಳಲ್ಲಿ ರೂಢಿಯಲ್ಲಿದ್ದ ವಿಧವೆಯರ ತಲೆ ಬೋಳಿಸಿಕೊಳ್ಳುವುದನ್ನು ತಡೆಯಲು ಅವರು ಕ್ಷೌರಿಕರ ವಿರುದ್ಧ ಮುಷ್ಕರವನ್ನು ಸಂಘಟಿಸಿದರು ಮತ್ತು ಮುನ್ನಡೆಸಿದರು.
9. ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಲು ಪ್ರೋತ್ಸಾಹಿಸಲು ಮತ್ತು ಡ್ರಾಪ್-ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಅವರು ಶಾಲೆಗೆ ಹಾಜರಾಗಲು ಮಕ್ಕಳಿಗೆ ಸ್ಟೈಫಂಡ್ ನೀಡುತ್ತಿದ್ದರು.
10. ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಅಂತರ್ಗತವಾಗಿರುವ ಸಮಯದಲ್ಲಿ ಅವರು ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಿದರು. ಅವರು ತಮ್ಮ ಪತಿಯೊಂದಿಗೆ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿದರು. ಸತ್ಯಶೋಧಕ ಸಮಾಜವು ಪುರೋಹಿತರು ಮತ್ತು ವರದಕ್ಷಿಣೆ ಇಲ್ಲದೆ ವಿವಾಹಗಳನ್ನು ಆಯೋಜಿಸುತ್ತದೆ.
ಶಿಕ್ಷಣ ಕ್ಷೇತ್ರದಲ್ಲಿ ಶ್ಲಾಘನೀಯ ಪ್ರಯತ್ನ ಮಾಡಿದ ಫುಲೆ ದಂಪತಿಯನ್ನು ಸರ್ಕಾರದಿಂದ ಸನ್ಮಾನಿಸಲಾಯಿತು. ನಿಜವಾಗಿ ಸಾವಿತ್ರಿಬಾಯಿ ಫುಲೆ ಅವರ ವ್ಯಕ್ತಿತ್ವ ಮತ್ತು ಅವರ ಕುರಿತಾದ ಸಂಗತಿಗಳು ಎಲ್ಲರಿಗೂ ತಲುಪುವಂತದ್ದು.