ಮಹರ್ಷಿ ವಾಲ್ಮೀಕಿಯವರ ಜನ್ಮದಿನದ ನೆನಪಿಗಾಗಿ ಅಶ್ವಿನ್ ತಿಂಗಳ ಹುಣ್ಣಿಮೆಯ ದಿನದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ. ರಾಮಾಯಣ ಮತ್ತು ಮೊದಲ ಸಂಸ್ಕೃತ ಶ್ಲೋಕಗಳನ್ನು ಬರೆದ ಮೊದಲ ಕವಿ ವಾಲ್ಮೀಕಿ. ಇವರನ್ನು 'ಆದಿ ಕವಿ' ಎಂದೂ ಕರೆಯುತ್ತಾರೆ. ಈ ವರ್ಷ ವಾಲ್ಮೀಕಿ ಜಯಂತಿಯನ್ನು ಅಕ್ಟೋಬರ್ 20ರ ಬುಧವಾರದಂದು ಆಚರಿಸಲಾಗುತ್ತಿದೆ.
ವಾಲ್ಮೀಕಿ ಜಯಂತಿಯನ್ನು ಉತ್ತರ ಮತ್ತು ಮಧ್ಯ ಭಾರತದಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಪ್ರಗತಿ ದಿವಸ್ ಎಂದು ಕೂಡ ಕರೆಯಲಾಗುತ್ತದೆ. ದೇಶಾದ್ಯಂತ ವಾಲ್ಮೀಕಿ ದೇವಸ್ಥಾನಗಳಲ್ಲಿ ರಾಮಾಯಣದ ಶ್ಲೋಕಗಳನ್ನು ಪಠಿಸುವ ಮೂಲಕ ಕವಿಯನ್ನು ಪೂಜಿಸುತ್ತಾರೆ. ಮಹರ್ಷಿ ವಾಲ್ಮೀಕಿ ಹುಣ್ಣಿಮೆಯಂತಹ 'ಪ್ರಖರತೆ' ಹೊಂದಿದ್ದರು ಎಂದು ಹೇಳಲಾಗುತ್ತದೆ. ಆದ್ದರಿಂದ ಜನರು ಹುಣ್ಣಿಮೆಯ ದಿನದಂದು ವಾಲ್ಮೀಕಿ ಜಯಂತಿಯನ್ನು ಆಚರಿಸಲು ಪ್ರಾರಂಭಿಸಿದರು.
ಬ್ರಹ್ಮ ಪುತ್ರ ನಾರದ ಮುನಿಯ ಆದೇಶದ ಮೇರೆಗೆ ವಾಲ್ಮೀಕಿ ಜೀ ರಾಮಾಯಣವನ್ನು ಬರೆದರು. ವಾಲ್ಮೀಕಿಯ ಬರಹಗಳಿಂದ ನಾರದ ಮುನಿ ದಿಗ್ಭ್ರಮೆಗೊಂಡರು ಮತ್ತು ಭವಿಷ್ಯದ ಪೀಳಿಗೆಗೆ ರಾಮಾಯಣವನ್ನು ಸುಲಭ ಭಾಷೆಯಲ್ಲಿ ಬರೆಯುವಂತೆ ಕೇಳಿದರು. ಅಂತಹ ಮಹಾನ್ ಕವಿ ಮಹರ್ಷಿ ವಾಲ್ಮೀಕಿ ಬರೆದ ಕೆಲವು ಆಧ್ಯಾತ್ಮಿಕ, ಸ್ಫೂರ್ತಿದಾಯಕ, ಪ್ರೇರಕ ಮತ್ತು ಜೀವನವನ್ನು ಬದಲಾಯಿಸುವ ಉಲ್ಲೇಖಗಳನ್ನು ಇಲ್ಲಿ ನೀಡಲಾಗಿದೆ ನೀವು ಓದಿ ತಿಳಿಯಿರಿ.
ಮಹರ್ಷಿ ವಾಲ್ಮೀಕಿ ಜಯಂತಿ : ಸ್ಫೂರ್ತಿದಾಯಕ ಮತ್ತು ಪ್ರೇರಣೆ ನೀಡುವ ಉಲ್ಲೇಖಗಳು
ಯಾವಾಗಲೂ ಸಂತೋಷವಾಗಿರುವುದು ಕಷ್ಟಕರವಾದ ವಿಷಯ. ಒಬ್ಬರ ಜೀವನದಲ್ಲಿ ಸುಖ ಮತ್ತು ದುಃಖಗಳು ಪರ್ಯಾಯವಾಗಿರುತ್ತವೆ. ಜೀವನದಲ್ಲಿ ನಿರಂತರವಾಗಿ ಸಂತೋಷದಿಂದಿರಲು ಎಂದಿಗೂ ಸಾಧ್ಯವಿಲ್ಲ.
ಮಹರ್ಷಿ ವಾಲ್ಮೀಕಿ ಜಯಂತಿ : ಸ್ಫೂರ್ತಿದಾಯಕ ಮತ್ತು ಪ್ರೇರಣೆ ನೀಡುವ ಉಲ್ಲೇಖಗಳು
ಉತ್ಸಾಹಕ್ಕಿಂತ ಹೆಚ್ಚಿನ ಶಕ್ತಿ ಬೇರೊಂದಿಲ್ಲ. ಉತ್ಸಾಹಿಗಳಿಗೆ ಈ ಜಗತ್ತಿನಲ್ಲಿ ಸಾಧಿಸಲಾಗದ್ದು ಯಾವುದೂ ಇಲ್ಲ.
ಮಹರ್ಷಿ ವಾಲ್ಮೀಕಿ ಜಯಂತಿ : ಸ್ಫೂರ್ತಿದಾಯಕ ಮತ್ತು ಪ್ರೇರಣೆ ನೀಡುವ ಉಲ್ಲೇಖಗಳು
ಅತಿಥಿಯು ಕೆಟ್ಟ ನಡವಳಿಕೆ ಹೊಂದಿದ್ದರೂ, ವಿವೇಚನೆಯಿಂದ ಸ್ವಾಗತಿಸಲು ಅರ್ಹ.
ಮಹರ್ಷಿ ವಾಲ್ಮೀಕಿ ಜಯಂತಿ : ಸ್ಫೂರ್ತಿದಾಯಕ ಮತ್ತು ಪ್ರೇರಣೆ ನೀಡುವ ಉಲ್ಲೇಖಗಳು
ಧರ್ಮದಿಂದ ಸಂಪತ್ತು ಚಿಗುರುತ್ತದೆ, ಧರ್ಮದಿಂದ ಸಂತೋಷ ಉಕ್ಕುತ್ತದೆ ಮತ್ತು ಧರ್ಮದಿಂದ ಎಲ್ಲವನ್ನೂ ಪಡೆಯುತ್ತೇವೆ. ಧರ್ಮವು ಈ ಪ್ರಪಂಚದ ಸಾರವಾಗಿದೆ.