ಹುಟ್ಟಿದ ಪ್ರತಿ ಮಗುವಿಗೆ ಸರಿಯಾದ ಪೋಷಣೆ ಮತ್ತು ಉತ್ತಮ ಶಿಕ್ಷಣವನ್ನು ನೀಡಿದರೆ ಸಮಾಜದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯುತ್ತಾನೆ. ಆದರೆ ಕೆಲವೊಮ್ಮೆ ಪರಿಸ್ಥಿತಿ ಹೀಗಿರುವುದಿಲ್ಲ ಏಕೆಂದರೆ ಬಡತನ ರೇಖೆಯಲ್ಲಿರುವ ಅನೇಕ ಕುಟುಂಬಗಳಲ್ಲಿ ಮಕ್ಕಳು ಜೀವನದ ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ಕೂಡ ಹಿಂದಿದ್ದಾರೆ. ಹೀಗಾಗಿ ಅನೇಕ ಕುಟುಂಬಗಳಲ್ಲಿ ಮಕ್ಕಳನ್ನು ದುಡಿಯಲು ಹಚ್ಚುತ್ತಾರೆ. ಹೀಗೆ ಹಲವಾರು ಕಾರಣಗಳಿಂದಾಗಿ ಬಾಲ ಕಾರ್ಮಿಕರು ಹೆಚ್ಚುತ್ತಿದ್ದಾರೆ.
ಬಾಲ ಕಾರ್ಮಿಕರು ಹೆಚ್ಚುತ್ತಿರುವ ಕಾರಣದಿಂದಾಗಿ ಪ್ರತಿ ವರ್ಷ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ತೊಡಗಿಸದಿರಲು ಹಾಗೂ ಅವರಿಗೆ ಬಾಲ್ಯವನ್ನು ಉತ್ತಮ ರೀತಿಯಲ್ಲಿ ಕಳೆಯಲು ಅವಕಾಶ ಒದಗಿಸುವ ಮತ್ತು ಎಲ್ಲರಲ್ಲಿ ಈ ದಿನದ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಈ ಆಚರಣೆ ಹೊಂದಿದೆ. ಈ ದಿನ ಮಕ್ಕಳ ಕುರಿತಾದ ಕೆಲವು ಉಲ್ಲೇಖಗಳನ್ನು ನಾವು ನೋಡೋಣ.
1. ದೇವರು ಇನ್ನೂ ಮನುಷ್ಯನನ್ನು ನಿರುತ್ಸಾಹಗೊಳಿಸಲಿಲ್ಲ ಎಂಬ ಸಂದೇಶದೊಂದಿಗೆ ಪ್ರತಿ ಮಗುವೂ ಜನಿಸುತ್ತದೆ : ರವೀಂದ್ರನಾಥ ಟ್ಯಾಗೋರ್
2. ನಾವು ಈ ಜಗತ್ತಿನಲ್ಲಿ ನಿಜವಾದ ಶಾಂತಿಯನ್ನು ಕಲಿಸಬೇಕಾದರೆ, ಮತ್ತು ನಾವು ಯುದ್ಧದ ವಿರುದ್ಧ ನಿಜವಾದ ಯುದ್ಧವನ್ನು ನಡೆಸಬೇಕಾದರೆ, ನಾವು ಮಕ್ಕಳೊಂದಿಗೆ ಪ್ರಾರಂಭಿಸಬೇಕು: ಮಹಾತ್ಮ ಗಾಂಧಿ
3. ಮಕ್ಕಳು ನಮ್ಮ ಅತ್ಯಮೂಲ್ಯ ಸಂಪನ್ಮೂಲ: ಹರ್ಬರ್ಟ್ ಹೂವರ್, ಯುನೈಟೆಡ್ ಸ್ಟೇಟ್ಸ್ ನ 31 ನೇ ಅಧ್ಯಕ್ಷ
4. ಮಕ್ಕಳು ನೀವು ನಂಬುವ ಪ್ರಕಾರ ಬದುಕುವ ಸಾಧ್ಯತೆಯಿದೆ: ಲೇಡಿ ಬರ್ಡ್ ಜಾನ್ಸನ್, ಯುನೈಟೆಡ್ ಸ್ಟೇಟ್ಸ್ ನ ಮಾಜಿ ಪ್ರಥಮ ಮಹಿಳೆ
5. ಮಕ್ಕಳಿಗೆ ವಿಮರ್ಶಕರಿಗಿಂತ ಮಾದರಿಗಳು ಬೇಕು: ಜೋಸೆಫ್ ಜೌಬರ್ಟ್, ಫ್ರೆಂಚ್ ನೈತಿಕವಾದಿ
6. ಮಕ್ಕಳು ದೊಡ್ಡ ಅನುಕರಣಾಕಾರರು, ಆದ್ದರಿಂದ ಅನುಕರಿಸಲು ಅವರಿಗೆ ಉತ್ತಮವಾದದ್ದನ್ನು ನೀಡಿ: ಅನಾಮಧೇಯ
7. ಮಕ್ಕಳನ್ನು ಉತ್ತಮರನ್ನಾಗಿ ಮಾಡುವ ಉತ್ತಮ ಮಾರ್ಗವೆಂದರೆ ಅವರನ್ನು ಸಂತೋಷಪಡಿಸುವುದು: ಆಸ್ಕರ್ ವೈಲ್ಡ್, ಲೇಖಕ ಮತ್ತು ಕವಿ