ಡಾ.ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ 2017-18ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಅರ್ಹತೆಗಳನ್ನು ಹೊ೦ದಿರಬೇಕು.
ವೃತ್ತಿಪರ ಶಿಕ್ಷಣ ಪಡೆಯುವವರಿಗಾಗಿ ಆರ್ಥಿಕವಾಗಿ ಸಹಾಯವಾಗಲೆಂದು ಟ್ರಸ್ಟ್ ಮೂಲಕ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಹತೆ
- ವಿದ್ಯಾರ್ಥಿಯು ಕರ್ನಾಟಕದವರಾಗಿರಬೇಕು.
- ವಿದ್ಯಾರ್ಥಿಯ ಪೋಷಕರ ಕುಟು೦ಬದ ಒಟ್ಟು ವಾರ್ಷಿಕ ಆದಾಯ (100000) ಒ೦ದು ಲಕ್ಷ ರೂಪಾಯಿಯ ಒಳಗಿರಬೇಕು.
- ವಿದ್ಯಾರ್ಥಿಯು ಕರ್ನಾಟಕದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿ೦ದ ಮಾನ್ಯತೆ ಪಡೆದ ಕೋರ್ಸುಗಳಲ್ಲಿ ಪೂರ್ಣಪ್ರಮಾಣದ ಅವಧಿಯಲ್ಲಿ ಅಭ್ಯಾಸ ಮಾಡುತ್ತಿರಬೇಕು.
- ಅರೆಕಾಲಿಕ (Correspondence) ಕೋರ್ಸ್ ಓದುತ್ತಿರವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುವುದಿಲ್ಲ.
- ವಿದ್ಯಾರ್ಥಿಯು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು ಮತ್ತು ವಿದ್ಯಾರ್ಥಿಯು ಕೋರ್ ಬ್ಯಾಂಕಿಂಗ್ ಸೌಲಭ್ಯವಿರುವ ಯಾವುದಾದರು ಬ್ಯಾಂಕಿನಲ್ಲಿ ತಮ್ಮ ಖಾತೆ ಹೊಂದಿರಬೇಕು.
ಮೆರಿಟ್ ಆಧರಿಸಿ ವಿದ್ಯಾರ್ಥಿ ವೇತನ
ವಿದ್ಯಾರ್ಥಿವೇತನ ನೀಡಲು ಕಟ್ ಆಫ್ ಅಂಗಳನ್ನು ನಿಗಧಿಪಡಿಸಿದ್ದು, ಶೇಕಡವಾರು ಅಂಕಗಳಿಗೆ ಸಂಬಂಧಿಸಿದಂತೆ ವಿವಿಧ ಕೋರ್ಸುಗಳ ಮಾಹಿತಿಯು ಈ ಕೆಳಗಿನಂತಿದೆ.
ಕೋರ್ಸ್ | ಕಟ್ ಆಫ್ |
ಪಿಯುಸಿ, ಎಂಬಿಬಿಎಸ್ | ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.90 ಅಥವಾ ಹೆಚ್ಚಿನ ಅಂಕಗಳಿಸಿರಬೇಕು. |
ಡಿಪ್ಲೊಮಾ, ಬಿ.ಎಸ್ಸಿ, ಬಿ.ಕಾಂ, ಬಿ.ಇ, ಬಿವಿಎಸ್ಸಿ | ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.85 ಅಥವಾ ಹೆಚ್ಚಿನ ಅಂಕಗಳಿಸಿರಬೇಕು. |
ಬಿಸಿಎ, ಬಿಬಿಎಂ/ಬಿಬಿಎ, ಬಿಎ, ಬಿಡಿಎಸ್,ಬಿ.ಫಾರ್ಮ, ಎಂ.ಎಸ್ಸಿ, ಎಂ.ಎ, ಎಂ.ಕಾಂ, ಬಿ.ಎಡ್ | ವಿದ್ಯಾರ್ಥಿಯು ಪಿಯುಸಿಯಲ್ಲಿ ಶೇ.80 ಅಥವಾ ಹೆಚ್ಚಿನ ಅಂಕಗಳಿಸಿರಬೇಕು. |
ಸಿಎ,ಎಂಸಿಎ, ಎಂಬಿಎ, ಎಂ.ಎಡ್, ಎಂ.ಫಿಲ್, ಎಂ.ಟೆಕ್ | ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.75 ಅಥವಾ ಹೆಚ್ಚಿನ ಅಂಕಗಳಿಸಿರಬೇಕು. |
ಅರ್ಜಿ ಸಲ್ಲಿಸುವಿಕೆ
- ಅರ್ಜಿ ಸಲ್ಲಿಸುವವರು www.ssjanakalyantrust.org ವೆಬ್ಸೈಟ್ ಗೆ ಭೇಟಿ ನೀಡಿ.
- ನೀಡಿರುವ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
- ಅಪ್ಲೈ 'ಆನ್-ಲೈನ್' ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅಂಕಪಟ್ಟಿಗಳ ವಿವರ ಸೇರಿದಂತೆ ಆಧಾರ್ ಮತ್ತು ಬ್ಯಾಂಕ್ ಖಾತೆ ನಂಬರ್ ಮೂಲಕ ಅರ್ಜಿಗಳನ್ನು ಸಂಪೂರ್ಣವಾಗಿ ತಪ್ಪಿಲ್ಲದಂತೆ ತುಂಬಿ.
- ಅರ್ಜಿ ತುಂಬಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ, ಪಿಡಿಎಫ್ ರೂಪದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
- ಪ್ರಿಂಟ್ ತೆಗೆದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ, ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಟ್ರಸ್ಟ್ ವಿಳಾಸಕ್ಕೆ ಅಂಚೆ ಅಥವಾ ಕೊರಿಯರ್ ಮೂಲಕ ತಲುಪಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-08-2017
ಅರ್ಜಿ ತಲುಪಿಸಬೇಕಾದ ವಿಳಾಸ
The Secretary
Dr. Shamanur Shivashankarappa Janakalyan Trust
C/o. R L Law College,
Behind Bapuji Educational Association Head office
P J Extension, Davangere-577002, Karnataka. INDIA
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನು ಗಮನಿಸಿ ವಿಜ್ಞಾನದ ವಿದ್ಯಾರ್ಥಿನಿಯರಿಗಾಗಿ ಎಲ್ ಓರಿಯಲ್ ಸ್ಕಾಲರ್ಷಿಪ್
For Quick Alerts
For Daily Alerts
English summary
The Trust's Scholarship Program is currently focused on assisting students for their professional courses in Engineering, Technology, Management, Law, Nursing, Medicine and Dental sciences. Scholarship is award to students who have excelled in their academics and wish to continue studies further.
Story first published: Monday, July 3, 2017, 17:50 [IST]