ದೇಶದೆಲ್ಲೆಡೆ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಲ್ಲಾ ಶಾಲಾ ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿರುತ್ತದೆ. ಅದರಲ್ಲೂ ಶಾಲೆಗಳಲ್ಲಿ ಹಾಡು, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವುದು ಸಾಮಾನ್ಯವಾಗಿರುತ್ತದೆ. ಹಾಗಾಗಿ ನಾವಿಂದು ಗಣರಾಜ್ಯೋತ್ಸವ ದಿನವನ್ನು ಉದ್ದೇಶಿಸಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಷಣ ಮಾಡುವುದು ಹೇಗೆ ಮತ್ತು ಪ್ರಬಂಧ ಬರೆಯುವುದು ಹೇಗೆ ಎನ್ನುವುದಕ್ಕೆ ಸಲಹೆಯನ್ನು ನೀಡುತ್ತಿದ್ದೇವೆ.
ಗಣರಾಜ್ಯೋತ್ಸವ ಕುರಿತು ಪ್ರಬಂಧ ಬರೆಯಲು ಸಲಹೆ:
* ನೀವು ಪ್ರಬಂಧವನ್ನು ಎಲ್ಲರಿಗೂ ಅರ್ಥವಾಗುವಂತೆ ನಿಖರವಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಬರೆಯಲು ಪ್ರಯತ್ನಿಸಿ. ಸಂಕೀರ್ಣ ಪದಗಳು ಮತ್ತು ವಾಕ್ಯಗಳನ್ನು ಬರೆಯದಿರಿ.
* ಗಣರಾಜ್ಯೋತ್ಸವ ಕುರಿತ ಪ್ರಬಂಧದಲ್ಲಿ ಮೊದಲ ಪ್ಯಾರಾಗ್ರಾಫ್ ನಲ್ಲಿ ಮಹತ್ವದ ಕಿರು ಪರಿಚಯಾತ್ಮಕ ಟಿಪ್ಪಣಿಯನ್ನು ನೀಡಿ.
* ನಿಮ್ಮ ಪ್ರಬಂಧವು ಉತ್ತಮ ಸ್ಪಷ್ಟ ವಿವರಣೆಯೊಂದಿಗೆ ವಿವರಿಸಲು ಪ್ರಯತ್ನಿಸಿ. ಆಗ ಮಾತ್ರವೇ ಪ್ರಬಂಧಕ್ಕೆ ಒಂದು ಸಿಕ್ಕಿದಂತಾಗುತ್ತದೆ.
ಪ್ರಬಂಧ ಬರೆಯುವಾಗ ಈ ಅಂಶಗಳಿರಲಿ:
* ದಿನದ ಇತಿಹಾಸ ಮತ್ತು ಮಹತ್ವ
* ತ್ರಿವರ್ಣ ಧ್ವಜದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆ
* ಭಾರತದ ಸಂವಿಧಾನ ಮತ್ತು ಭಾರತೀಯ ನಾಗರಿಕರ ಹಕ್ಕುಗಳು
* ರಾಜ್ಪಾತ್ನಲ್ಲಿ ಗಣರಾಜ್ಯೋತ್ಸವ
* 1955 ರಲ್ಲಿ ಗಣರಾಜ್ಯೋತ್ಸವದಂದು ನಡೆದ ಮೊದಲ ಮೆರವಣಿಗೆ
ಭಾಷಣ ಮಾಡಲು ಇಲ್ಲಿವೆ ಸಲಹೆಗಳು:
ಭಾಷಣ ಅಂದರೆ ಒಂದು ಅರ್ಥಪೂರ್ವವಾದ ಮಾಹಿತಿಯನ್ನು ನೀಡುವುದು. ಗಣರಾಜ್ಯೋತ್ಸವದ ಹಿನ್ನೆಲೆಯೊಂದಿಗೆ ಅದರ ಗುರಿ ಉದ್ದೇಶಗಳನ್ನು ಎಲ್ಲರಿಗೂ ಮನ ಮುಟ್ಟುವಂತೆ ಮಾಡುವುದು.
ಭಾಷಣದಲ್ಲಿ ಏನೆಲ್ಲಾ ಅಂಶಗಳಿರಬೇಕು ?:
* ಗಣರಾಜ್ಯೋತ್ಸವ ಎಂಬ ಹೆಸರು ಏಕೆ ಬಂತು
* ಗಣರಾಜ್ಯೋತ್ಸವದ ಹಿನ್ನೆಲೆ
* ಈ ದಿನ ಮಹತ್ವ ಮತ್ತು ಉದ್ದೇಶ
* ಆಚರಣೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಬೇಕು
* ಆಚರಣೆಯಿಂದ ಮುಂದಿನ ಪೀಳಿಗೆಗೆ ಯಾವೆಲ್ಲಾ ಸಂದೇಶಗಳನ್ನು ತಲುಪಿಸಬೇಕು.
* ಪ್ರಸ್ತುತ ಘಟನೆಗಳನ್ನು ಉದಾಹರಣೆ ತೆಗೆದುಕೊಂಡು ಮಹನೀಯರ ಸಾಧನೆಯನ್ನು ನೆನೆಯಬೇಕು
ಈ ಎಲ್ಲಾ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ಭಾಷಣ ಮಾಡಬಹುದು ಮತ್ತು ಪ್ರಬಂಧವನ್ನು ಬರೆದಲ್ಲಿ ನಿಮ್ಮ ಬರಹ ಮತ್ತು ಮಾತು ಒಂದು ತೂಕದಿಂದ ಕೂಡಿರುತ್ತದೆ.